“ಗೀತೆಯ ಸತ್ಯ ಸಾರಾಂಶ"
1. ಪ್ರಶ್ನೆ:- ಗೀತೆಯ ಜ್ಞಾನ ಯಾವಾಗ ಹಾಗೂ ಯಾರು, ಯಾರಿಗೆ ಹೇಳಿದರು? ಯಾರು ಬರೆದರು? ದಯವಿಟ್ಟು ವಿಸ್ತಾರವಾಗಿ ಹೇಳಿ.
ಉತ್ತರ: - ಶ್ರೀಮದ್ಭಗವದ್ಗೀತೆಯ ಜ್ಞಾನವನ್ನು ಶ್ರೀ ಕೃಷ್ಣನ ಶರೀರದಲ್ಲಿ ಪ್ರವೇಶ ಮಾಡಿದ ಕಾಲ ಭಗವಾನನು (ವೇದಗಳಲ್ಲಿ ಹಾಗೂ ಗೀತೆಯಲ್ಲಿ 'ಬ್ರಹ್ಮ' ಎಂದು ಕರೆಯಲ್ಪಡುತ್ತದೆ) ಅರ್ಜುನನಿಗೆ ಹೇಳಿದನು. ಯಾವಾಗ ಕೌರವ ಮತ್ತು ಪಾಂಡವರು ತಮ್ಮ ಸಂಪತ್ತು ಅಂದರೆ ದಿಲ್ಲಿಯ ರಾಜ್ಯದ ಮೇಲೆ ತಮ್ಮ ತಮ್ಮ ಹಕ್ಕನ್ನು ಚಲಾಯಿಸಿ, ಯುದ್ಧವನ್ನು ಮಾಡಲು ಸಿದ್ಧರಾದರೋ, ಆಗ ಇಬ್ಬರ ಸೈನ್ಯವೂ ಎದುರು-ಬದುರಾಗಿ ಕುರುಕ್ಷೇತ್ರದ ಮೈದಾನದಲ್ಲಿ ನಿಂತಿತು. ಅರ್ಜುನನು ತನ್ನ ಎದುರಾಗಿ ನಿಂತಿದ್ದ ಸೈನ್ಯದಲ್ಲಿ ಭೀಷ್ಮ ಪಿತಾಮಹರು, ಗುರುದ್ರೋಣಾಚಾರ್ಯರು, ಬಂಧು ಬಾಂಧವರು, ಕೌರವರ ಮಕ್ಕಳು, ಅಳಿಯಂದಿರು, ಬಾವ ಮೈದುನರು, ಮಾವಂದಿರು....ಮುಂತಾದವರು ಕಾದಾಡಲು, ಮಡಿಯಲು ನಿಂತಿದ್ದನ್ನು ನೋಡಿದನು. ಕೌರವರು ಹಾಗೂ ಪಾಂಡವರು ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಇವರನ್ನು ನೋಡಿ ಅರ್ಜುನನಲ್ಲಿ ಮೃದು ಭಾವನೆ ಜಾಗೃತವಾಯಿತು. ಮತ್ತು ವಿಚಾರ ಮಾಡಿದನು 'ಯಾವ ರಾಜ್ಯ ಪ್ರಾಪ್ತಿಗಾಗಿ ನಾವು ನಮ್ಮ ಚಿಕ್ಕಪ್ಪನ ಮಕ್ಕಳನ್ನು, ಅಣ್ಣನ ಮಕ್ಕಳನ್ನು, ಅಳಿಯಂದಿರನ್ನು, ಬಾವ ಮೈದುನರನ್ನು, ಭೀಷ್ಮ ಪಿತಾಮಹನನ್ನು ಹಾಗೂ ಗುರು ಜನರನ್ನು ಸಾಯಿಸಲು ಹೊರಟಿದ್ದೇವೆಯೋ, ನಾವು ಎಷ್ಟು ಕಾಲ ಈ ಪ್ರಪಂಚದಲ್ಲಿ ಬದುಕಲು ಸಾಧ್ಯ? ಈ ರೀತಿ ಪ್ರಾಪ್ತವಾಗುವ ರಾಜ್ಯಕ್ಕೆ ಬದಲಾಗಿ ನಾವು ಭಿಕ್ಷೆ ಬೇಡಿ ನಮ್ಮ ಜೀವನ ಸಾಗಿಸುವುದು ಲೇಸು. ಆದರೆ ನಾವು ಯುದ್ಧ ಮಾಡುವುದಿಲ್ಲ' ಎಂದು ನಿರ್ಧಾರ ಮಾಡಿ ಅರ್ಜುನನು ಬಿಲ್ಲು ಬಾಣವನ್ನು ತ್ಯಜಿಸಿಬಿಟ್ಟನು ಮತ್ತು ರಥದ ಹಿಂದಿನ ಆಸನದಲ್ಲಿ ಹೋಗಿ ಕುಳಿತುಬಿಟ್ಟನು. ಅರ್ಜುನನ ಈ ಅವಸ್ಥೆಯನ್ನು ನೋಡಿ ಶ್ರೀ ಕೃಷ್ಣನು ಹೀಗೆಂದನು:-
“ಯಾವ ಯೋಧರ ಜೊತೆ ನೀನು ಯುದ್ಧ ಮಾಡಬೇಕೆಂದು ಒಮ್ಮೆ ನೋಡು". ಆಗ ಅರ್ಜುನನು, “ಹೇ ಕೃಷ್ಣ, ಏನೇ ಆದರೂ ನಾನು ಯುದ್ಧ ಮಾಡುವುದಿಲ್ಲ” ಎಂದನು ತನ್ನ ಉದ್ದೇಶ ಹಾಗೂ ತನ್ನ ಮನಸ್ಸಿನಲ್ಲಿ ಏಳುತ್ತಿದ್ದ ವಿಚಾರಗಳನ್ನು ತಿಳಿಸಿದನು. ಅಂದರೆ ಶ್ರೀ ಕೃಷ್ಣನಲ್ಲಿ ಕಾಲದೇವ ಪ್ರವೇಶ ಮಾಡಿದನು. ಅದೇ ಸಮಯದಲ್ಲಿ ಯಾವುದೋ ಪ್ರೇತವು ಬೇರೆ ವ್ಯಕ್ತಿಯ ಶರೀರದಲ್ಲಿ ಪ್ರವೇಶ ಮಾಡಿ ಮಾತನಾಡುವಂತೆ ಕಾಲದೇವನು ಶ್ರೀ ಕೃಷ್ಣನಲ್ಲಿ ಪ್ರವೇಶ ಮಾಡಿದನು. `ಆ ಕಾಲದೇವನು ಶ್ರೀಕೃಷ್ಣನ ಶರೀರದಲ್ಲಿ ಪ್ರವೇಶ ಮಾಡಿ ಶ್ರೀಮದ್ಭಗವದ್ಗೀತೆಯ ಜ್ಞಾನವನ್ನು ನೀಡುತ್ತಾ ಯುದ್ಧಮಾಡಲು ಪ್ರೇರೇಪಣೆ ಮಾಡಿದನು. ಹಾಗೂ ಕಲಿಯುಗದಲ್ಲಿ ವೇದಗಳನ್ನು ತಿಳಿದಿರುವವರು ಯಾರೂ ಇರದ ಕಾರಣ ನಾಲ್ಕೂ ವೇದಗಳ ಸಂಕ್ಷಿಪ್ತ ವರ್ಣನೆ ಮತ್ತು ಸಾರಾಂಶವನ್ನು 'ಗೀತಾಜ್ಞಾನ' ಎಂಬ 18 ಅಧ್ಯಾಯಗಳಲ್ಲಿ 700 ಶ್ಲೋಕಗಳಲ್ಲಿ ವಿವರಿಸಿದನು. ಗೀತಾಜ್ಞಾನದಲ್ಲಿ ತಾನು ಏನು ಹೇಳಿರುವೆನು ಎಂಬುದರ ಬಗ್ಗೆ ಶ್ರೀಕೃಷ್ಣನಿಗೆ ಗೊತ್ತೇ ಆಗಲಿಲ್ಲ.
(ಬ್ರಹ್ಮಕುಮಾರಿ ಪಂಥದವರು ಇದೇ ಕಾಲ ಬ್ರಹ್ಮನನ್ನು ನಿರಾಕಾರ ಶಿವಬಾಬಾ ಎಂದು ಕರೆಯುತ್ತಾರೆ. ಶಿವಬಾಬಾನು ಯಾರೋ ವೃದ್ಧನ ಶರೀರದಲ್ಲಿ ಪ್ರವೇಶಿಸಿ ಗೀತೆಯ ಜ್ಞಾನವನ್ನು ತಿಳಿಸಿದ್ದಾನೆ ಎಂದು ಅವರು ನಂಬಿದ್ದಾರೆ. ಈ ಶಿವಬಾಬಾ ಬ್ರಹ್ಮಕುಮಾರಿಯವರ ಆರಾಧ್ಯದೈವ). * ಕೆಲ ವರ್ಷಗಳ ನಂತರ ವೇದವ್ಯಾಸ ಋಷಿಗಳು ಈ ಅಮೃತ ಜ್ಞಾನವನ್ನು ಸಂಸ್ಕೃತ ಭಾಷೆಯಲ್ಲಿ ಹಾಗೂ ದೇವನಾಗರಿ ಲಿಪಿಯಲ್ಲಿ ಬರೆದರು. ನಂತರ ಅನುವಾದಕರು ತಮ್ಮ ಬುದ್ಧಿಗೆ ಆನುಗುಣವಾಗಿ ಈ ಪವಿತ್ರ ಗ್ರಂಥವನ್ನು ಹಿಂದಿಗೆ ಹಾಗೂ ಇನ್ನಿತರ ಭಾಷೆಗಳಿಗೆ ಅನುವಾದಿಸಿದ್ದಾರೆ. ವರ್ತಮಾನದಲ್ಲಿ ಇದು ಉತ್ತರ ಪ್ರದೇಶದ ಗೋರಖಪುರದ ಗೀತಾ ಪ್ರೆಸ್ನಿಂದ ಪ್ರಕಟವಾಗುತ್ತಿದೆ. ಇದರ ಪ್ರತಿಲಿಪಿಗಳು ಇದೇ ಪುಸ್ತಕದ ಕೊನೆಯಲ್ಲಿ ಮುದ್ರಿತವಾಗಿದೆ.
ಪ್ರಶ್ನೆ :- ಇಂದಿನ (2012ನೇ ಇಸವಿ)ವರೆಗೆ ಗೀತೆಯ ಜ್ಞಾನವನ್ನು ಶ್ರೀಕೃಷ್ಣನು ಹೇಳಿದ್ದಾನೆ ಎಂದು ತಿಳಿಯಲಾಗಿತ್ತು. ಆದರೆ ಶ್ರೀ ಕೃಷ್ಣನ ಶರೀರದಲ್ಲಿ ಕಾಲದೇವನು ಪ್ರವೇಶಿಸಿ ಇದನ್ನು ಹೇಳಿದ್ದಾನೆ ಹಾಗೂ ಶ್ರೀಕೃಷ್ಣನಿಗೆ ತಾನು ಏನು ಹೇಳಿದ್ದೇನೆ ಎಂದು ಗೊತ್ತೇ ಇಲ್ಲ ಎಂದು ಹೇಳುತ್ತಿರುವಿರಿ, ಇದು ಅಸತ್ಯವೆನ್ನಿಸುತ್ತದೆ. ಇದಕ್ಕೆ ಏನಾದರೂ ಆಧಾರವಿದೆಯೇ?
ಉತ್ತರ :- ನಿಮಗೆ ಬೇಕಾದಷ್ಟು ಆಧಾರಗಳನ್ನು ನೀಡುತ್ತೇವೆ. ಇದರಿಂದ ಗೀತಾ ಶಾಸ್ತ್ರದ ಜ್ಞಾನವನ್ನು ಕಾಲದೇವನು ಹೇಳಿದ್ದಾನೆ ಎನ್ನುವುದು ನಿಮಗೆ ಸಾಬೀತಾಗುತ್ತದೆ. ಮೊಟ್ಟ ಮೊದಲಿಗೆ ಗೀತೆಯಿಂದಲೇಆಧಾರ ನೀಡುತ್ತೇವೆ.
* ಆಧಾರ ಸಂ. 1 :- ಗೀತೆಯ 10ನೇ ಅಧ್ಯಾಯದಲ್ಲಿ ಹೇಳಿರುವಂತೆ, ಗೀತೆಯ ಜ್ಞಾನವನ್ನು ತಿಳಿಸಿದಾತನು ತನ್ನ ವಿರಾಟ ರೂಪವನ್ನು ತೋರಿಸಿದಾಗ ಅರ್ಜುನನು ಕಂಪಿಸಲಾರಂಭಿಸಿದನು ಹಾಗೂ ಅತ್ಯಂತ ಭಯಭೀತನಾದನು. ಅರ್ಜುನನ ಭಾವ ಮೈದುನನೇ ಶ್ರೀಕೃಷ್ಣ ಏಕೆಂದರೆ ಕೃಷ್ಣನ ತಂಗಿಯಾದ ಸುಭದ್ರೆಯನ್ನು ಅರ್ಜುನನು ವಿವಾಹವಾಗಿದ್ದನು ಎಂಬ ವಿಚಾರವನ್ನು ಇಲ್ಲಿ
ಹೇಳುವುದು ಅನಿವಾರ್ಯ, ಗೀತೆಯ ಜ್ಞಾನವನ್ನು ತಿಳಿಸಿದಾತನು ಆ ಸಮಯದಲ್ಲಿ ಸಾವಿರ ಬಾಹುಗಳುಳ್ಳ ವಿರಾಟ ರೂಪವನ್ನು ತೋರಿಸಿದಾಗ ಅರ್ಜುನನು ಹೀಗೆಂದನು, 'ಹೇ ದೇವ! ನೀವು ಯಾರು?' (ಗೀತೆಯ 11ನೇ ಅಧ್ಯಾಯದ 31ನೇ ಶ್ಲೋಕ)
* ಹೇ ಸಹಸ್ರಬಾಹು, (ಸಾವಿರ ಭುಜವುಳ್ಳವನು) ನೀವು ನಿಮ್ಮ ಚತುರ್ಭುಜ ರೂಪದಲ್ಲಿ ದರ್ಶನ ನೀಡಿರಿ (ಏಕೆಂದರೆ ಅರ್ಜುನನು ಅವನನ್ನು ವಿಷ್ಣು ಅವತಾರ ಕೃಷ್ಣನೆಂದು ತಿಳಿದಿದ್ದನು. ಆದರೆ ಆ ಸಮಯದಲ್ಲಿ ಕೃಷ್ಣನ ಶರೀರದಿಂದ ಹೊರಬಂದ ಕಾಲನು ತನ್ನ ವಿರಾಟರೂಪವನ್ನು ತೋರಿಸಿದ್ದನು) ನಾನು ಭಯಭೀತನಾಗಿದ್ದೇನೆ. ನಿಮ್ಮ ಈ ರೂಪವನ್ನು ನಾನು ಸಹಿಸಲು ಸಾಧ್ಯವಾಗುತ್ತಿಲ್ಲ. (ಗೀತೆಯ 11ನೇ ಅಧ್ಯಾಯದ 46ನೇ ಶ್ಲೋಕ)
* ಓದುಗರೇ ವಿಚಾರಮಾಡಿ: ನಾವು ನಮ್ಮ ಭಾವ ಮೈದುನನ ಹತ್ತಿರ ಹೀಗೆ ಕೇಳಲು ಸಾಧ್ಯವೇ? 'ಹೇ ಮಹಾನುಭಾವ ನೀವ್ಯಾರೆಂದು ಹೇಳಿ' ಎನ್ನಲು ಖಂಡಿತಾ ಸಾಧ್ಯವಿಲ್ಲ. ಒಮ್ಮೆ ಒಬ್ಬ ವ್ಯಕ್ತಿಯಲ್ಲಿ ಒಂದು ಪ್ರೇತ ಮಾತನಾಡಲಾರಂಭಿಸಿತು. ಜೊತೆಯಲ್ಲಿದ್ದ ವ್ಯಕ್ತಿ ನೀವು ಯಾರು ಮಾತನಾಡುತ್ತಿರುವುದು ಎಂದು ಕೇಳಿದನು. ಆಗ ನಿನ್ನ ಮಾವ ಮಾತನಾಡುತ್ತಿದ್ದೇನೆ, ನಾನು ಒಂದು ದುರ್ಘಟನೆಯಲ್ಲಿ ಸತ್ತು ಹೋದೆ ಎಂದು ಆ ವ್ಯಕ್ತಿ ಹೇಳಿದನು. ನಾವು ನಮ್ಮ ಸಹೋದರನನ್ನು ಅರಿಯಲಾರವೇ? ಇದೇ ರೀತಿ ಶ್ರೀ ಕೃಷ್ಣನಲ್ಲಿ ಕಾಲದೇವ ಮಾತನಾಡುತ್ತಿತ್ತು.
* ಆಧಾರ 2 :- ಗೀತೆಯ IIನೇ ಅಧ್ಯಾಯದ 21 ನೇ ಶ್ಲೋಕದಲ್ಲಿ ಅರ್ಜುನನು ಹೀಗೆಂದಿದ್ದಾನೆ, “ನೀವು ದೇವತೆಗಳ ಸಮೂಹದ ಸಮೂಹವನ್ನೇ ಭಕ್ಷಿಸುತ್ತಿರುವಿರಿ. ಅವರೆಲ್ಲಾ ಭಯಭೀತರಾಗಿ ಕೈ ಜೋಡಿಸಿ ನಿಮ್ಮನ್ನು ಸ್ತುತಿಸುತ್ತಿದ್ದಾರೆ. ಮಹರ್ಷಿಗಳ ಮತ್ತು ಸಿದ್ಧರ ಸಮುದಾಯವು ನಿಮ್ಮಿಂದ ತಮ್ಮ ಜೀವನದ ಮಂಗಳ ಕಾಮನೆಗಳನ್ನು ಆಶಿಸುತ್ತದೆ". ಗೀತೆಯ 11ನೇ ಅಧ್ಯಾಯದ 32ನೇ ಶ್ಲೋಕದಲ್ಲಿ ಗೀತೆಯ ಜ್ಞಾನದಾತನು ಹೀಗೆಂದಿದ್ದಾನೆ, "ಹೇ ಅರ್ಜುನ! ನಾನು ಒಬ್ಬ ಬೆಳೆದ ಮೃತ್ಯು ಶ್ರೀ ಕೃಷ್ಣನ ಶರೀರದಲ್ಲಿ ಈಗ ಪ್ರವೇಶಿಸಿದ್ದೇನೆ. ಎಲ್ಲಾ ವ್ಯಕ್ತಿಗಳನ್ನೂ ನಾವ ಮಾಡುತ್ತೇನೆ. ನೀನು ಯುದ್ಧ ಮಾಡದಿದ್ದರೂ ವಿಪಕ್ಷದ ಇಡೀ ಸೈನ್ಯವು ನಾಶವಾಗುತ್ತದೆ",
ಇದರಿಂದ ಸಾಬೀತಾಗುವುದೇನೆಂದರೆ, ಗೀತೆಯ ಜಾನವನ್ನು ಶ್ರೀಕೃಷ್ಣನ ಶರೀರದಲ್ಲಿ ಪ್ರವೇಶ ಮಾಡಿದ್ದ ಕಾಲನು ಹೇಳಿದ್ದಾನೆ. ಶ್ರೀ ಕೃಷ್ಣನು ಈ ಮೊದಲು ಎಂದೂ ನಾನು ಕಾಲನು ಎಂದು ಎಲ್ಲಿಯೂ ಹೇಳಿಲ್ಲ. ಶ್ರೀ ಕೃಷ್ಣನನ್ನು ನೋಡಿ ಯಾರೂ ಭಯಭೀತರಾಗುತ್ತಿರಲಿಲ್ಲ. ಗೋಪ ಗೋಪಿಯರು, ಗೋಪಾಲಕರ ಮಕ್ಕಳು, ಪಶು-ಪಕ್ಷಿಗಳು ಇವರೆಲ್ಲಾ ದರ್ಶನ ಪಡೆದು ಆನಂದ ಪಡುತ್ತಿದ್ದರು, 'ಹಾಗಾದರೆ ಶ್ರೀ ಕೃಷ್ಣನು ಕಾಲನೇ?' ಅಲ್ಲ, ಆದ್ದರಿಂದ ಗೀತೆಯ ಜ್ಞಾನವನ್ನು ನೀಡಿದಾತನು ಕಾಲನು. ಇವನು ಶ್ರೀ ಕೃಷ್ಣನ ಶರೀರದಲ್ಲಿ ಪ್ರವೇಶಿಸಿ ಗೀತಾಶಾಸ್ತ್ರದ ಜ್ಞಾನವನ್ನು ನೀಡಿದನು.
* ಆಧಾರ=1:=ಖೆಯ 11ನೇ ಅಧ್ಯಾಯದ 47ನೇ ಶ್ಲೋಕದಲ್ಲಿ ಗೀತೆಯ ಜ್ಞಾನವನ್ನು ನೀಡಿದವನು, “ಹೇ ಅರ್ಜುನ ನಾನು ಪ್ರಸನ್ನನಾಗಿ ನನ್ನ ಶಕ್ತಿಯಿಂದ ನಿನ್ನ ದಿವ್ಯದೃಷ್ಟಿಯನ್ನು ತೆರೆದು ಈ ವಿರಾಟ ರೂಪವನ್ನು ತೋರಿಸಿದ್ದೇನೆ. ಈ ವಿರಾಟ ರೂಪವು ನಿನ್ನ ವಿನಃ ಬೇರೆ ಯಾರೂ ನೋಡಿಲ್ಲ" ಎಂದು ಹೇಳಿದನು.
* ವಿಚಾರ ಮಾಡಬೇಕಾದ ವಿಷಯ :- ಪ್ರಿಯ ಓದುಗರೇ! ಮಹಾಭಾರತ ಗ್ರಂಥದಲ್ಲಿ ಒಂದು ಪ್ರಕರಣವಿದೆ. ಶ್ರೀ ಕೃಷ್ಣನು ಕೌರವರ ಸಭೆಯಲ್ಲಿ ಹಾಜರಾಗಿದ್ದಾಗ ಅವರಿಗೆ ಈ ರೀತಿ ಹೇಳಿದನು, “ನೀವಿಬ್ಬರೂ (ಪಾಂಡವರು ಹಾಗೂ ಕೌರವರು) ಪರಸ್ಪರ ಮಾತುಕತೆಯ ಮೂಲಕ ನಿಮ್ಮ ಸಂಪತ್ತನ್ನು (ರಾಜ್ಯ) ಭಾಗ ಮಾಡಿಕೊಳ್ಳಿ. ಯುದ್ಧವು ಶೋಭೆ ತರುವಂಥಾದ್ದಲ್ಲ.* ಆಗ ಪಾಂಡವರು, “ನಮಗೆ ಐದು ಹಳ್ಳಿಗಳನ್ನು ಕೊಡಿ, ಅದರಲ್ಲೇ ನಾವು ತೃಪ್ತಿ ಪಟ್ಟುಕೊಳ್ಳುತ್ತೇವೆ” ಎಂದರು. ಆಗ ದುರ್ಯೋಧನನು ಈ ಬೇಡಿಕೆಯನ್ನು ಒಪ್ಪದ “ಪಾಂಡವರಿಗೆ ಒಂದು ಸೂಜಿಯ ಮೊನೆಯಷ್ಟು ರಾಜ್ಯವನ್ನೂ ಕೊಡವು, ಯುದ್ಧ ಮಾಡಿ ಪಡೆದುಕೊಳ್ಳಬಹುದು” ಎಂದು ಹೇಳಿದನು. ಈ ಮಾತಿನಿಂದ ಕೃಷ್ಣನಿಗೆ ಬಹಳ ಕೋಪ ಬಂದಿತು. ದುರ್ಯೋಧನನಿಗೆ ಹೀಗೆಂದು ಹೇಳಿದನು, ನೀನು ಈ ಭೂಮಿಯನ್ನು ನಾಶ ಮಾಡಲೆಂದೇ ಹುಟ್ಟಿರುವೆ. ಕುಲವನ್ನು ಹಾಳು ಮಾಡುತ್ತಿರುವೆ. ಭಲೇ ಮನುಷ್ಯ! ಎಲ್ಲಿಯ ಅರ್ಧರಾಜ್ಯ ಎಲ್ಲಿಯ ಐದು ಹಳ್ಳಿಗಳು ನಾಚಿಕೆಯಾಗಬೇಕು” ಎಂದನು.
ಈ ಮಾತುಗಳನ್ನು ಕೇಳಿದ ದುರ್ಯೊಧನನ್ನು ಕೆಂಡಾಮಂಡಲವಾದನು ಹಾಗೂ ಸಭೆಯಲ್ಲಿ ಹಾಜರಿದ್ದ ತನ್ನ ಸಹೋದರರಿಗೆ ಹಾಗೂ ಮಂತ್ರಿಗಳಿಗೆ 'ಈ ಕೃಷ್ಣಯಾದವನನ್ನು ಬಂಧಿಸಿ' ಎಂದು ಹೇಳಿದರು, ಅದೇ ವೇಳೆ ಶ್ರೀ ಕೃಷ್ಣನು ವಿರಾಟ ರೂಪವನ್ನು ತೋರಿದನು. ಸಭೆಯಲ್ಲಿ ಹಾಜರಿದ್ದ ಎಲ್ಲಾ ಸಭಾಸದರು ಆ ವಿರಾಟ ರೂಪವನ್ನು ನೋಡಿ ಭಯಭೀತರಾಗಿ ಕುರ್ಚಿಗಳ ಕೆಳಗೆ ಅವಿತಿಟ್ಟುಕೊಂಡರು. ಕೆಲವರು ಕಣ್ಣುಗಳನ್ನು ಮುಚ್ಚಿಕೊಂಡು ಕೆಳಗೆ ಬಿದ್ದುಬಿಟ್ಟರು. ಶ್ರೀಕೃಷ್ಣನು ಸಭೆಯನ್ನು ಬಿಟ್ಟು ಹೊರಟು ಹೋದನು ಹಾಗೂ ತನ್ನ ವಿರಾಟರೂಪವನ್ನು ಸಮಾಪ್ತಿಗೊಳಿಸಿದನು.
ಈಗ ಈ ವಿಚಾರದ ಬಗ್ಗೆ ಚಿಂತಿಸೋಣ, ಗೀತೆಯ 11ನೇ ಅಧ್ಯಾಯದ 17ನೇ ಶ್ಲೋಕದಲ್ಲಿ ಗೀತೆಯ ಜ್ಞಾನದಾತನು ಹೀಗೆಂದಿದ್ದಾನೆ, 'ನನ್ನ ವಿರಾಟ ರೂಪವನ್ನು ನಿನ್ನ ವಿನಃ ಈ ಮೊದಲು ಬೇರೆಯಾರೂ ನೋಡಿಲ್ಲ ಅರ್ಜುನ!' ಆದರೆ ಕೃಷ್ಣನ ವಿರಾಟ ರೂಪವನ್ನು ಈ ಮೊದಲೇ ಕೌರವರು ಹಾಗೂ ಉಳಿದೆಲ್ಲಾ ಸಭಾಸದರು ನೋಡಿದ್ದರು. ಕೃಷ್ಣನೇ ಗೀತೆಯ ಜ್ಞಾನವನ್ನು ಬೋಧಿಸಿದ್ದಿದ್ದರೆ, ಅವನು ಹೀಗೆ ಹೇಳುತ್ತಿರಲಿಲ್ಲ.
ಇದರಿಂದ ಗೀತೆಯ ಜ್ಞಾನವನ್ನು ಶ್ರೀ ಕೃಷ್ಣನು ಹೇಳಿಲ್ಲ, ಬದಲಾಗಿ ಅವನ ಶರೀರದಲ್ಲಿ ಪ್ರೇತಗಳಂತೆ ಪ್ರವೇಶಿಸಿ ಕಾಲನು (ಕ್ಷರ ಪುರುಷನು) ಹೇಳಿದ್ದಾನೆ ಎಂದು ಸಾಬೀಡಾಯಿತು. ಇದು ಮೂರನೇ ಆಧಾರ.
* ಆಧಾರ ಸಂ. 4 - ಶ್ರೀ ವಿಷ್ಣು ಪುರಾಣದ (ಗೀತಾ ಪ್ರೆಸ್, ಗೋರಖ್ ಪುರದಿಂದ ಪ್ರಕಾಶಿತಗೊಂಡ) ಪುಟ ಸಂಖ್ಯೆ 233ರಲ್ಲಿ ಆಧಾರವಿದೆ. ಒಮ್ಮೆ ದೇವತೆಗಳು ಹಾಗೂ ರಾಕ್ಷಸರಲ್ಲಿ ಯುದ್ಧವಾಯಿತು. ದೇವತೆಗಳು ಪರಾಜಿತರಾಗಿ ಸಮುದ್ರ ತೀರಕ್ಕೆ ಹೋಗಿ ಅವಿತಿಟ್ಟುಕೊಂಡರು. ಆಗ ಭಗವಂತನನ್ನು ಪ್ರಾರ್ಥಿಸಲಾರಂಭಿಸಿದರು. ಕಾಲನು ತನ್ನ ವಾಸ್ತವಿಕ ರೂಪದಲ್ಲಿ ಯಾರಿಗೂ, ಎಂದಿಗೂ ದರ್ಶನ ನೀಡುವುದಿಲ್ಲ, ತನ್ನ ಯೋಗ ಮಾಯೆಯಿಂದ ಅವಿತಿಟ್ಟುಕೊಂಡಿರುತ್ತೇನೆ. ಎಂದು ಪ್ರತಿಜ್ಞೆ ಮಾಡಿದ್ದನು. (ಗೀತೆಯ 7ನೇ ಅಧ್ಯಾಯದ 24-25ನೇ ಶ್ಲೋಕ) ಆದ್ದರಿಂದ ಈ ಕಾಲನು (ಕ್ಷರ ಪುರುಷನು) ಕೆಲವರಿಗೆ ವಿಷ್ಣುವಿನ ರೂಪದಲ್ಲಿ ದರ್ಶನ ನೀಡಿದರೆ, ಇನ್ನು ಕೆಲವರಿಗೆ ಶಂಕರನ ರೂಪದಲ್ಲಿ, ಇನ್ನೂ ಕೆಲವರಿಗೆ ಬ್ರಹ್ಮಾನ ರೂಪದಲ್ಲಿ ದರ್ಶನ ನೀಡುತ್ತಾನೆ.
ದೇವತೆಗಳಿಗೆ ವಿಷ್ಣುವಿನ ರೂಪದಲ್ಲಿ ದರ್ಶನ ನೀಡಿ ಹೀಗೆಂದನು, ನಾನು ನಿಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿರುವೆ. ನೀವು ಪುರಂಜ್ಯ ರಾಜನನ್ನು ಯುದ್ಧ ಮಾಡಲು ಅಣಿಗೊಳಿಸಿ, ನಾನು ಆ ರಾಜನ ದೇಹದಲ್ಲಿ ಪ್ರವೇಶ ಮಾಡಿ ರಾಕ್ಷಸರನ್ನು ಸಂಹರಿಸುವೆ', ಅದು ಹಾಗೇ ಆಯಿತು (ಇನ್ನೂ ಹೆಚ್ಚಿನ ಮಾಹಿತಿಗಾಗಿ ನೀವು ವಿಷ್ಣು ಪುರಾಣವನ್ನು ಓದಬಹುದು) * ಆಧಾರ ಸಂ 5 :- ಶ್ರೀ ವಿಷ್ಣು ಪುರಾಣದ 242ನೇ ಪುಟದಲ್ಲಿ ಈ ಆಧಾರವಿದೆ, ಒಮ್ಮೆ ನಾಗವಂಶಿಗಳು ಹಾಗೂ ಗಂಧರ್ವರ ನಡುವೆ ಯುದ್ಧವಾಯಿತು. ಗಂಧರ್ವರು ನಾಗಗಳ ಬಹುಮೂಲ್ಯವಾದ ವಜ್ರ ವೈಡೂರ್ಯ ಹಾಗೂ ಖಜಾನೆಯನ್ನೇ ಲೂಟಿ ಮಾಡಿದರು. ಅವರ ರಾಜ್ಯವನ್ನೂ ವಶಪಡಿಸಿಕೊಂಡರು. ನಾಗಗಳು ಭಗವಂತನನ್ನು ಸ್ತುತಿಸಿದರು. ಇದೇ ಕಾಲನು ವಿಷ್ಣುವಿನ ರೂಪ ಧರಿಸಿ ಪ್ರತ್ಯಕ್ಷನಾದನು. ಹೇಳಿದನು ನೀವು ಪುರುಕುತ್ಸ ರಾಜನನ್ನು ಗಂಧರ್ವರ ಜೊತೆ ಯುದ್ಧ ಮಾಡಲು ಸಿದ್ಧತೆ ನಡೆಸಿಕೊಳ್ಳಿ, ನಾನು ಪುರುಕುತ್ಸನ ಶರೀರದಲ್ಲಿ ಪ್ರವೇಶಿಸಿ ದುಷ್ಟ ಗಂಧರ್ವರನ್ನು ನಾಶ ಮಾಡುತ್ತೇನೆ' ಎಂದು ಹೇಳಿದನು. ಅದು ಹಾಗೇ ಆಯಿತು.
ಮೇಲೆ ತಿಳಿಸಿದ ವಿಷ್ಣು ಪುರಾಣದ ಕಥೆಗಳಿಂದ ಸ್ಪಷ್ಟವಾಗುವುದೇನೆಂದರೆ, ಈ ಕಾಲ ಭಗವಾನನು (ಕ್ಷರ ಪುರುಷನು) ಈ ರೀತಿ ಅವ್ಯಕ್ತನಾಗಿ (ಗುಪ್ತವಾಗಿ) ಇದ್ದು ಕಾರ್ಯ ಮಾಡುತ್ತಾನೆ. ಇದೇ ರೀತಿ ಇವನು ಶ್ರೀ ಕೃಷ್ಣನಲ್ಲೂ ಪ್ರವೇಶಿಸಿ ಗೀತೆಯ ಜ್ಞಾನವನ್ನು ಹೇಳಿದ್ದಾನೆ.
* ಆಧಾರ ಸಂ. 6 :- ಮಹಾಭಾರತ ಗ್ರಂಥದಲ್ಲಿ (ಗೋರಖ್ ಪುರದ ಉ.ಪ್ರದೇಶ) ಗೀತಾ ಪ್ರೆಸ್ನಿಂದ ಪ್ರಕಟಗೊಂಡ) ಭಾಗ 2, 667ನೇ ಪುಟದಲ್ಲಿ, ಮಹಾಭಾರತದ ಯುದ್ಧದ ನಂತರ ರಾಜ ಯುಧಿಷ್ಠಿರನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದ ನಂತರ ಶ್ರೀಕೃಷ್ಣನು ದ್ವಾರಕೆಗೆ ತೆರಳಲು ಸಿದ್ಧನಾದನು ಎಂದು ಬರೆದಿದೆ. ಆಗ ಅರ್ಜುನನು ಶ್ರೀ ಕೃಷ್ಣನಿಗೆ ಹೀಗೆಂದನು, 'ನೀವು ಆ ಗೀತೆಯ ಜ್ಞಾನವನ್ನು ಮತ್ತೊಮ್ಮೆ ತಿಳಿಸಿ, ನಾನು ಆ ಜ್ಞಾನವನ್ನು ಮರೆತು ಬಿಟ್ಟಿದ್ದೇನೆ.” ಆಗ ಶ್ರೀಕೃಷ್ಣನು, ಹೇ ಅರ್ಜುನ ನೀನು ಬುದ್ಧಿಹೀನನು, ನೀನೊಬ್ಬ ದಡ್ಡನು, ಶ್ರದ್ಧೆ ಇಲ್ಲದವನು, ನೀನು ಇಂಥಾ ಅಮೂಲ್ಯವಾದ ಜ್ಞಾನವನ್ನು ಹೇಗೆ ಮರೆತುಬಿಟ್ಟೆ, ಆಗ ನಾನು ಯೋಗದಿಂದ ಗೀತೆಯ ಜ್ಞಾನವನ್ನು ನಿನಗೆ ತಿಳಿಸಿದ್ದೆ. ಈಗ ನಾನು ಅದನ್ನು ಹೇಳಲು ಸಾಧ್ಯವಿಲ್ಲ' ಎಂದು ಹೇಳಿದನು.
* ಯೋಚಿಸಿ :- ಯುದ್ಧದ ಸಮಯದಲ್ಲಿ ಯೋಗದಿಂದ ಹೇಳಲು ಸಾಧ್ಯವಾಗಿರಬೇಕಾದರೆ, ಶಾಂತವಾದ ವಾತಾವರಣದಲ್ಲಿ ಯೋಗಾರೂಢನಾಗಲು ಇರುವ ಸಮಸ್ಯೆ ಏನು? ವಾಸ್ತವವಾಗಿ ಕಾಲನು ಶ್ರೀ ಕೃಷ್ಣನಲ್ಲಿ ಪ್ರವೇಶಿಸಿ ಈ ಜ್ಞಾನವನ್ನು ಹೇಳಿದ್ದಾನೆ.
* ಶ್ರೀ ಕೃಷ್ಣನಿಗೆ ಸ್ವತಃ ಗೀತೆಯ ಜ್ಞಾನ ನೆನಪಿಲ್ಲ? ಅವನು ಭಾಷಣಕಾರನೇ ಆಗಿದ್ದರೆ, ಒಬ್ಬ ಭಾಷಣಕಾರನಿಗೆ ಎಲ್ಲವೂ ನೆನಪಿರುತ್ತದೆ. ಕೇಳುಗರಿಗೆ ಒಮ್ಮೆ ಕೇಳಿದರೆ 10 ಪ್ರತಿಶತ ನೆನಪಿರುತ್ತದೆ. ಆದ್ದರಿಂದ ಕಾಲನು (ಕ್ಷರ ಪುರುಷನು) ಕೃಷ್ಣನಲ್ಲಿ ಪ್ರವೇಶಿಸಿ ಗೀತೆಯ ಜ್ಞಾನವನ್ನು ಹೇಳಿದ್ದಾನೆ ಎನ್ನುವುದು ಸಾಬೀತಾಗುತ್ತದೆ. ಮೇಲಿನ ಆಧಾರದಿಂದ ಗೀತೆಯ ಜ್ಞಾನವನ್ನು ಶ್ರೀ ಕೃಷ್ಣನು ಹೇಳಿಲ್ಲ ಎಂದು ಸ್ಪಷ್ಟವಾಗುತ್ತದೆ. ಅವನಿಗೆ ಅದರ ಬಗ್ಗೆ ತಿಳುವಳಿಕೆಯೇ ಇಲ್ಲ. ಶ್ರೀ ಕೃಷ್ಣನ ದೇಹದಲ್ಲಿ ಪ್ರವೇಶಿಸಿ ಕಾಲಪುರುಳ (ಕ್ಷರ ಪುರುಷ)ನು ಹೇಳಿದ್ದಾನೆ.
ಪ್ರಶ್ನೆ 2 :- ಕಾಲ ಪುರುಷನು ಯಾರು?
ಉತ್ತರ :- ಅದಕ್ಕಾಗಿ ಈ ಪುಸ್ತಕದಲ್ಲಿರುವ 'ಸೃಷ್ಟಿ ರಚನೆ' ಎಂಬ ಅಧ್ಯಾಯವನ್ನು ಓದಿ,
ಪ್ರಶ್ನೆ 3 :- ಕಾಲಪುರುಷನು ಅಂದರೆ ಬ್ರಹ್ಮನು ಅವಿನಾಶಿಯೇ ಅಥವಾ ಹುಟ್ಟಿ- ಸಾಯುತ್ತಾನೆಯೇ?
ಉತ್ತರ :- ಹುಟ್ಟುತ್ತಾನೆ-ಸಾಯುತ್ತಾನೆ.
ಪ್ರಶ್ನೆ 4 :- ಗೀತೆಯಲ್ಲಿ ಸಾಕ್ಷ್ಯವೆಲ್ಲಿದೆ?
ಉತ್ತರ :- ಗೀತೆಯ 2ನೇ ಅಧ್ಯಾಯದ 12ನೇ ಶ್ಲೋಕ, 4ನೇ ಅಧ್ಯಾಯದ 5ನೇ ಶ್ಲೋಕ ಹಾಗೂ 10ನೇ ಅಧ್ಯಾಯದ 2ನೇ ಶ್ಲೋಕದಲ್ಲಿ ಗೀತೆಯ ಜ್ಞಾನವನ್ನು ನೀಡಿದಾತನು ಸ್ವತ: ಒಪ್ಪಿಕೊಂಡಿದ್ದಾನೆ. ಅವನು ಹೀಗೆಂದಿದ್ದಾನೆ. 'ನಾನೂ ಹುಟ್ಟುತ್ತೇನೆ. ಸಾಯುತ್ತೇನೆ, ನಾನು ಅವಿನಾಶಿಯಲ್ಲ, ಹೇ ಅರ್ಜುನ, ನಿನ್ನ ಮತ್ತು ನನ್ನ ಅನೇಕ ಜನ್ಮಗಳಾಗಿವೆ. ನಿನಗೆ ಗೊತ್ತಿಲ್ಲದಿರಬಹುದು, ಆದರೆ ನನಗೆ ಗೊತ್ತಿದೆ. ನೀನು ನಾನು ಹಾಗೂ ಈ ರಾಜರು ಹಾಗೂ ಸೈನಿಕರು ಈ ಮೊದಲೂ ಇದ್ದರು, ಮುಂದೆಯೂ ಇರುತ್ತಾರೆ. ನಾವು ವರ್ತಮಾನದಲ್ಲಿ ಮಾತ್ರ ಇರುತ್ತೇವೆ ಎಂದು ತಿಳಿಯಬೇಡ, ನನ್ನ ಸೃಷ್ಟಿಯು ದೇವತೆಗಳಿಗೂ ಗೊತ್ತಿಲ್ಲ, ಋಷಿಗಳಿಗೂ ಗೊತ್ತಿಲ್ಲ, ಏಕೆಂದರೆ ಅವರೆಲ್ಲಾ ನನ್ನಿಂದ ಸೃಷ್ಟಿಯಾದವರು',
ಇದರಿಂದ ಗೀತೆಯ ಜ್ಞಾನದಾತನು ಕಾಲಪುರುಷನು ಅವಿನಾಶಿಯಲ್ಲವೆಂದು ತಿಳಿಯುತ್ತದೆ. ಆದ್ದರಿಂದ ಇವನು ಕ್ಷರ ಪುರುಷ (ನಾಶವಾಗುವ ಪ್ರಭು) ಎಂದು ಕರೆಯಲ್ಪಡುತ್ತಾನೆ.
ಪ್ರಶ್ನೆ 5 :- ಹಾಗಾದರೆ ಬ್ರಹ್ಮಾ, ವಿಷ್ಣು ಮತ್ತು ಮಹೇಶ್ವರರು ಅವಿನಾಶಿಗಳೇ?
ಉತ್ತರ :- ಇಲ್ಲ, ಇವರೂ ನಾಶವಾಗುವರು, ಇವರಿಗೂ ಜನನ-ಮರಣಗಳಿವೆ. ಬ್ರಹ್ಮಾ, ವಿಷ್ಣು ಮತ್ತು ಮಹೇಶ್ವರರಿಗೂ ತಂದೆ ತಾಯಿಗಳಿದ್ದಾರೆ.
ಪ್ರಶ್ನೆ 6 :- ಸಾಕ್ಷಿ ಇದ್ದರೆ ತಿಳಿಸಿ, ಅವರ ತಂದೆ ತಾಯಿಗಳ ಹೆಸರನ್ನು ತಿಳಿಸಿ.
ಉತ್ತರ :- ಗೀತಾ ಪ್ರೇಸ್ಗೋರಖಪುರದಿಂದ ಪ್ರಕಾಶಿತವಾಗಿರುವ “ಶ್ರೀ ದೇವಿ ಮಹಾಪುರಾಣ'' ಇದರ ನುವಾದಕರು ಶ್ರೀ ಕೀರ್ತನಾಚಾರ್ಯ ಲಕ್ಷ್ಮಣದಾಸ್ ವೇಲಣಕ ಅಧ್ಯಾಯ 4-5ರ ಮೂರನೆಯ ಸ್ಕಂದ ಪುಟ 105 (ಹಿಂದಿಯಲ್ಲಿ 123) ರಲ್ಲಿ ಶ್ರೀ ವಿಷ್ಣುವು ತನ್ನ ತಾಯಿಯಾದ ದುರ್ಗೆಯ ಸ್ತುತಿಯನ್ನು ಮಾಡುತ್ತಾ ಹೀಗೆಂದಿದ್ದಾನೆ, 'ಹೇ ಮಾತೆ, ನೀನು ಶುದ್ಧ ಸ್ವರೂಪಳು, ಇಡೀ ಪ್ರಪಂಚವು ನಿನ್ನಿಂದಲೇ ಹುಟ್ಟಿದೆ. ನಿನ್ನ ಕೃಪೆಯಿಂದ ನಾವೆಲ್ಲಾ ಇದ್ದೇವೆ. ನಾನು, ಬ್ರಹ್ಮಾ ಹಾಗೂ ಶಂಕರರು ಹುಟ್ಟುತ್ತೇವೆ, ಸಾಯುತ್ತೇವೆ, ನಮ್ಮ ಜನನವೂ ಇದೆ, ಮರಣವೂ ಇದೆ. ನಾವು ಅವಿನಾಶಿಗಳಲ್ಲ, ನೀನೇ ಜಗತ್ತಿನ ಜನನಿ, ಹಾಗೂ ಸನಾತನೀ ದೇವಿ, ನೀನು ಪ್ರಕೃತಿ ದೇವಿಯೂ ಹೌದು." ಆಗ ಶಂಕರ ಭಗವಾನನು ಹೇಳಿದನು, 'ಹೇ ಮಾತಾ! ವಿಷ್ಣುವಿನ ನಂತರ ಹುಟ್ಟುವ ಬ್ರಹ್ಮಾನು ನಿನ್ನ ಮಗನಾದರೆ, ತಮೋಗುಣ ಲೀಲೆಯನ್ನು ಮಾಡುವಂತಹ ನಾನು ನಿನ್ನ ಮಗನಲ್ಲವೇ? ಅಂದರೆ ನನ್ನನ್ನೂ ಹುಟ್ಟಿಸಿದವಳು ನೀನೇ!' ಹೀಗೆ ದೇವಿ ಮಹಾಪುರಾಣದಿಂದ ಬ್ರಹ್ಮಾ, ವಿಷ್ಣು ಹಾಗೂ ಶಿವನಿಗೆ ಜನ್ಮ ನೀಡುವವಳು ದುರ್ಗಾ ಮಾತೆ (ಅಷ್ಟಂಗಿ ದೇವಿ) ಹಾಗೂ ಈ ಮೂವರೂ ನಶ್ವರರು ಎಂದು ಸಾಬೀತಾಯಿತು.
ಶ್ರೀ ಬ್ರಹ್ಮಾ, ವಿಷ್ಣು ಹಾಗೂ ಶಿವನ ತಂದೆ ಯಾರು?
ಆಧಾರ:- "ಶ್ರೀ ಶಿವ ಮಹಾಪುರಾಣ" ಇದರ ನುವಾದಕರು ಶ್ರೀ ಕೀರ್ತನಾಚಾರ್ಯ ಲಕ್ಷ್ಮಣದಾಸ್ ವೇಲಣಕ. (ಗೀತಾ ಪ್ರೇಸ್ಗೋರಖಪುರದಿಂದ ಪ್ರಕಾಶನ) ಇವರ ತಂದೆಯ ಬಗ್ಗೆ ಮಾಹಿತಿ ಇದೆ. ಶ್ರೀ ಶಿವ ಮಹಾಪುರಾಣದ ರುದ್ರಸಂಹಿತೆ ಪ್ರಥಮ ಖಂಡದ ಅಧ್ಯಾಯ 6- 7ರ 81 ರಿಂದ 85ನೇ ಪುಟದವರೆಗೆ ಈ ಪ್ರಕರಣವಿದೆ. (ಹಿಂದಿಯಲ್ಲಿ 100-110)
ತನ್ನ ಪುತ್ರನಾದ ನಾರದರ ಪ್ರಶ್ನೆಗೆ ಉತ್ತರವನ್ನು ನೀಡುತ್ತಾ ಶ್ರೀ ಬ್ರಹ್ಮಾ ಹೀಗೆಂದನು, ಹೇ
ಪುತ್ರ ನೀನು ಸೃಷ್ಟಿಯ ಸೃಷ್ಟಿಕರ್ತನ ವಿಷಯದಲ್ಲಿ ಕೇಳಿದ ಪ್ರಶ್ನೆಗೆ ಉತ್ತರವನ್ನು ಹೇಳುತ್ತೇನೆ,
ಪ್ರಾರಂಭದಲ್ಲಿ ಕೇವಲ ಒಬ್ಬ 'ಸದ್ಬ್ರಹ್ಮ' ಮಾತ್ರ ಇದ್ದನು. ಎಲ್ಲಾ ಜಾಗಗಳಲ್ಲೂ ಪ್ರಳಯವಿತ್ತು. ಆ ನಿರಾಕಾರ ಬ್ರಹ್ಮನು ತನ್ನ ಸ್ವರೂಪವನ್ನು ಶಿವನಂತೆ ತೋರಿಸಿದನು. ಅವನನ್ನು 'ಸದಾಶಿವ' ಎಂದು ಕರೆಯಲಾಗುತ್ತದೆ. ಅವನು ತನ್ನ ಶರೀರದಿಂದ ಒಬ್ಬ ಸ್ತ್ರೀಯನ್ನು ಬೇರ್ಪಡಿಸಿದನು, ಆ ಸ್ತ್ರೀ ದುರ್ಗಾ, ಜಗದಂಬಿಕ, ಪ್ರಕೃತಿದೇವಿ ಹಾಗೂ ತ್ರಿದೇವ (ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ)ರ ಜನನಿ ಎಂದು ಕರೆಯಲ್ಪಟ್ಟಳು. ಅವಳಿಗೆ 8 ಭುಜಗಳಿವೆ. ಅವಳನ್ನು 'ಶಿವ' ಎಂದೂ ಕರೆಯುತ್ತಾರೆ.
* ಶ್ರೀ ವಿಷ್ಣುವಿನ ಉತ್ಪತ್ತಿ :- ಸದಾಶಿವ ಹಾಗೂ ಶಿವ (ದುರ್ಗೆ)ಯು ಪತಿ-ಪತ್ನಿಯ
ರೂಪದಲ್ಲಿ ಇದ್ದು ಒಬ್ಬ ಪುತ್ರನನ್ನು ಹುಟ್ಟಿಸಿದರು. ಅವನ ಹೆಸರನ್ನು ವಿಷ್ಣುವೆಂದು ಇಟ್ಟರು. * ಶ್ರೀ ಬ್ರಹ್ಮಾನ ಉತ್ಪತ್ತಿ :- ಶ್ರೀ ಬ್ರಹ್ಮಾನು, 'ಯಾವ ರೀತಿ ಶಿವ ಹಾಗೂ ಶಿವೆಯ ಸಂಯೋಗದಿಂದ ವಿಷ್ಣು ಹುಟ್ಟಿದನೋ, ಅದೇ ರೀತಿ ನನ್ನ ಉತ್ಪತ್ತಿ ಆಯಿತು' ಎಂದು ಹೇಳಿದನು.
ಟಿಪ್ಪಣಿ :- ಇಲ್ಲಿ ಶಿವನನ್ನು ಕಾಲಬ್ರಹ್ಮನೆಂದು ತಿಳಿಯಬೇಕು. ಶಿವೆ ಎಂದರೆ ದುರ್ಗೆ ಎಂದು ತಿಳಿಯಬೇಕು. ಪ್ರಿಯ ಓದುಗರೇ, ರುದ್ರ ಸಂಹಿತೆಯ ಖಂಡದಲ್ಲಿ ಶಿವನ ಹುಟ್ಟಿನ ಪ್ರಕರಣವಿಲ್ಲ. ಇದು ಅನುವಾದಕರ ತಪ್ಪು, ಹಾಗೆಯೇ ದೇವಿ ಪುರಾಣದಲ್ಲಿ ಶಂಕರನು, ನನ್ನ ಜನ್ಮವು ದುರ್ಗೆ (ಪ್ರಕೃತಿ) ಯಿಂದ ಆಗಿದೆ ಎಂದು ಒಪ್ಪಿಕೊಂಡಿದ್ದಾನೆ.
* ಶಂಕರನೂ ಸಹ ಶಿವ ಹಾಗೂ ಶಿವೆಯ ಪುತ್ರನು :- ಶಿವ ಮಹಾಪುರಾಣದ ವಿಶ್ವೇಶ್ವರ ಸಂಹಿತೆ ಖಂಡದ 24ರಿಂದ 30ನೇ ಪುಟದಲ್ಲಿ ಆಧಾರವಿದೆ. ಒಮ್ಮೆ ಶ್ರೀ ಬ್ರಹ್ಮಾ ಹಾಗೂ ವಿಷ್ಣುವಿನ ಮಧ್ಯದಲ್ಲಿ ಒಂದು ಯುದ್ಧವೇ ನಡೆಯಿತು. ಬ್ರಹ್ಮಾನು ಹೀಗೆಂದನು, 'ನಾನು ನಿನ್ನ ತಂದೆ. ಏಕೆಂದರೆ ಈ ಪ್ರಪಂಚವು ನನ್ನಿಂದ ಸೃಷ್ಟಿಯಾಗಿದೆ. ನಾನು ಪ್ರಜಾಪಿತನು', ಆಗ ವಿಷ್ಣುವು, 'ನಾನು ನಿನ್ನ ತಂದೆ ನೀನು ನಿನ್ನ ನಾಭಿ ಕಮಲದಿಂದ ಹುಟ್ಟಿರುವೆ' ಎಂದರು. ಒಬ್ಬರು ಇನ್ನೊಬ್ಬರು ಹೊಡೆಯಲ್ಲ | ಮುಂದಾದರು. ಅದೇ ಸಮಯದಲ್ಲಿ ಸದಾಶಿವನು ಅಂದರೆ ಕಾಲಬ್ರಹ್ಮನು ಆ ಇಬ್ಬರ ಮಧ್ಯದಲ್ಲಿ ಒಂದು ಬಿಳಿ ಬಣ್ಣದ ಪ್ರಕಾರಮಯವಾದ ಸ್ತಂಭವನ್ನು ನಿಲ್ಲಿಸಿದನು. ನಂತರ ಸ್ವತಃ ಶಂಕರನ | ರೂಪದಲ್ಲಿ ಪ್ರತ್ಯಕ್ಷನಾಗಿ, ನಿಮ್ಮಲ್ಲಿ ಯಾರೂ ಸೃಷ್ಟಿಕರ್ತರಲ್ಲ ಹೇಳಿದರು, 'ಹೇ ಪುತ್ರರೇ, ನಾನ ನಿಮಗೆ ಜಗತ್ತಿನ ಸೃಷ್ಟಿ ಹಾಗೂ ಸ್ಥಿತಿ ಎಂಬ ಎರಡು ಕೆಲಸಗಳನ್ನು ನೀಡಿದ್ದೇನೆ. ಅದೇ ರೀತಿ ನಾನು ಶಂಕರ ಹಾಗೂ ರುದ್ರರಿಗೆ ಎರಡು ಕಾರ್ಯಗಳಾದ ಸಂಹಾರ ಹಾಗೂ ತಿರೋಗತಿಯನ್ನು ನೀಡಿದ್ದೇನೆ. ವೇಷಗಳಲ್ಲಿ ನನ್ನನ್ನು ಬ್ರಹ್ಮನೆಂದಿದ್ದಾರೆ. ನನಗೆ ಐದು ಮುಖಗಳಿವೆ. ಒಂದು ಮುಖದಿ ಆಕಾರ (ಆ), ಎರಡನೇ ಮುಖದಿಂದ ಉಕಾರ (ಉ), ಮೂರನೇ ಮುಖದಿಂದ ಮಕಾರ (ಮ), ನಾಲ್ಕನೇ ಮುಖದಿಂದ ಬಂದು () ಹಾಗೂ ಐದನೇ ಮುಖದಿಂದ ನಾದ (ಶಬ್ದ) ಪ್ರಕಟವಾಗಿವೆ. ಈ ಐದೂ ಅವಯವಗಳು ಸೇರಿ ಒಂದು ಅಕ್ಷರ ಓಂ ಆಗಿದೆ. ಇದು ನನ್ನ ಮೂಲ ಮಂತ್ರ ಮೇಲಿನ ಶಿವ ಮಹಾಪುರಾಣದಿಂದ, ಬ್ರಹ್ಮಾ, ವಿಷ್ಣು ಹಾಗೂ ಶಂಕರರ ತಾಯಿಯ ಮಾತೆಯಾದ ದುರ್ಗಾದೇವಿ (ಅಷ್ಟಂಗಿ ದೇವಿ) ಹಾಗೂ ತಂದೆ ಸದಾಶಿವ ಅಂದರೆ 'ಕಾಲ ಮತ್ತು ಈ ಕಾಲಬ್ರಹ್ಮನ್ನು ಭಗವದ್ಗೀತೆಯ ಜ್ಞಾನವನ್ನು ಶ್ರೀ ಕೃಷ್ಣರಲ್ಲಿ ಪ್ರವೇಶಿಸಿ ಹೇಳಿದ್ದಾನೆ. ಎಂದು ಸಾಬೀತಾಯಿತು. ಇವನನ್ನು ಕರಪುರುಷ, ಕರಬ್ರಹ್ಮ ಎಂದು ಕರೆಯಲಾಗುತ್ತದೆ. ಇದೇ ಆಧಾರವು ಭಗವದ್ಗೀತೆಯ 14ನೇ ಅಧ್ಯಾಯದ 3ರಿಂದ 5ರವರೆಗಿನ ಶ್ಲೋಕಗಳಲ್ಲಿ ಇದೆ. ರಜೆ (ರಜೋಗುಣ ಬ್ರಹ್ಮಾ), ಸತ್ (ಸತ್ವಗುಣ ವಿಷ್ಣು) ತಮ್ (ತಮೋಗುಣ ಶಂಕರ) ಈ ಮೂರು ಗುಣ ಪ್ರಕೃತಿ ಅರ್ಥಾತ್ ದುರ್ಗಾ ದೇವಿಯಿಂದ ಹುಟ್ಟಿದರು, ಪ್ರಕೃತಿಯಂತ ಎಲ್ಲಾ ಜೀವಿಗಳನ್ನು ಹುಟ್ಟಿಸಿದ ತಾಯಿ, ನಾನು (ಗೀತಾ ಜ್ಞಾನದಾತನು) ಎಲ್ಲಾ ಜೀವಿಗಳ ತಂದೆ, ನಾನು ದುರ್ಗೆ
(ಪ್ರಕೃತಿ)ಯ ಗರ್ಭದಲ್ಲಿ ಬೀಜ ಸ್ಥಾಪಿಸುತ್ತೇನೆ. ಇದರಿಂದ ಎಲ್ಲರ ಸೃಷ್ಟಿಯಾಗುತ್ತದೆ ಎಂದಿದ್ದಾನೆ.
ಪ್ರಶ್ನೆ 7 - ರಜೋಗುಣ ಬ್ರಹ್ಮಾ, ಸತ್ವಗುಣ ವಿಷ್ಣು ಹಾಗೂ ತಮೋಗುಣ ಶಂಕರ ಎನ್ನುವುದಕ್ಕೆ ಯಾವ ಆಧಾರವಿದೆ?
ಉತ್ತರ 1) :- ಶ್ರೀ ಮಾರ್ಕಂಡೇಯ ಪುರಾಣದ (ಸಚಿತ್ರ ದಪ್ಪ ಅಚ್ಚು ಗೀತಾ ಪ್ರೆಸ್, ಗೋರಖ್ಪುರದಿಂದ ಪ್ರಶಿತವಾದ) 123 ಪುಟದಲ್ಲಿ, ರಜೋಗುಣ್ಣ ಬಾ, ಸಗುಣ ಎಷ್ಟು ಹಾಗೂ ತಮೋಗುಣ ಶಂಕರ- ಈ ಮೂವರೂ ಬ್ರಹ್ಮನ ಪ್ರಧಾನ ಶಕ್ತಿಗಳು, ಈ ಮೂವರೇ ದೇವತೆಗಳು ಇವರೇ ಮೂರು ಗುಣಗಳು ಎಂದು ಹೇಳಲಾಗಿದೆ.
2) ಶ್ರೀ ದೇವಿ ಮಹಾಪುರಾಣ ಸಂಸ್ಕೃತ ಮತ್ತು ಹಿಂದಿ ಅನುವಾದ (ಶ್ರೀ ವೆಂಕಟೇಶ್ವರ ಪ್ರೆಸ್, ಮುಂಬೈನಿಂದ ಪ್ರಕಾಶಿತವಾದ)ದಲ್ಲಿ ಮೂರನೇ ಸ್ಕಂದ 5ನೇ ಅಧ್ಯಾಯದ 8ನೇ ಶ್ಲೋಕದಲ್ಲಿ 'ಹೇ ಮಾತೆ! ಒಂದು ವೇಳೆ ನೀವು ನಮ್ಮ ಮೇಲೆ ದಯೆ ಇಟ್ಟರೆ ನಮ್ಮನ್ನು ರಜೋಗುಣಯುಕ್ತ ಬ್ರಹ್ಮಾ, ಸತ್ವಗುಣಯುಕ್ತ ವಿಷ್ಣು ಹಾಗೂ ತಮೋಗುಣಯುಕ್ತನಾಗಿ ನನ್ನನ್ನು ಏಕೆ ಮಾಡಿದೆ ಎಂದು ಶಂಕರನು ಕೇಳಿದನು' ಎಂದು ಬರೆದಿದೆ.
ಇದರಿಂದ ರಜೋಗುಣ ಬ್ರಹ್ಮಾ, ಸತ್ವಗುಣ ವಿಷ್ಣು ಹಾಗೂ ತಮೋಗುಣ ಶಂಕರ ಎಂದು ಸಾಬೀತಾಯಿತು,
ಪ್ರಶ್ನೆ 8 :- ಪರಮಾತ್ಮನನ್ನು ಅಜನ್ಮ, ಅಜರ ಅಮರ ಎನ್ನುತ್ತಾರೆ. ಮೇಲೆ ತಿಳಿಸಿದ ಪ್ರಕರಣ ಹಾಗೂ ಆಧಾರಗಳಿಂದ ಬ್ರಹ್ಮಾ, ವಿಷ್ಣು, ಶಂಕರ-ಈ ಮೂವರು ನಶ್ವರರು ಎಂದು ಸಾಬೀತಾಯಿತು. ಹಾಗಾದರೆ ಅವಿನಾಶಿ ಪರಮಾತ್ಮನು ಯಾರು? ಬ್ರಹ್ಮ, ವಿಷ್ಣು, ಶಂಕರ ಮತ್ತು ಕಾಲಬ್ರಹ್ಮನು ಪರಮಾತ್ಮನಲ್ಲವೇ? ಆಧಾರ ಸಮೇತ ತಿಳಿಸಿ,
ಉತ್ತರ :- ಮೊದಲು ಬ್ರಹ್ಮಾ, ವಿಷ್ಣು, ಮಹೇಶ್ವರ ಹಾಗೂ ಕಾಲಬ್ರಹ್ಮನು ಪರಮಾತ್ಮನೇ, ಅಲ್ಲವೇ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಪರಮಾತ್ಮನು ಅದನ್ನ ಅಂದರೆ ಎಂದಿಗೂ ಅವನ ಜನವಾಗಿಲ್ಲ, ಆಗುವುದಿಲ್ಲ ಎಂದು ನೀವು ನಿಮ್ಮ ಪ್ರಶ್ನೆಯಲ್ಲೇ ಉತ್ತರ ನೀಡಿದ್ದೀರಿ, ಮೇಲಿನ ಉದಾಹರಣೆಗಳಿಂದ ಬ್ರಹ್ಮಾ, ವಿಷ್ಣು, ಶಂಕರನಿಗೆ ತಂದೆ ತಾಯಿಗಳಿದ್ದಾರೆ ಎಂದು ಸಾಬೀತುಪಡಿಸಲಾಗಿದೆ. ಬ್ರಹ್ಮನೂ ನಶ್ವರನು. ಅವನ ಜನ್ಮವೂ ಆಗಿದೆ. ಹಾಗಾಗಿ ಅವನೂ ಪರಮಾತ್ಮನಲ್ಲವೆಂದು ಸ್ಪಷ್ಟವಾಯಿತು. ಹಾಗಾದರೆ ಅವಿನಾಶಿ ಯಾರು ಎಂಬ ಪ್ರಶ್ನೆ ಉದ್ಭವವಾಯಿತು.
ಇದನ್ನು ಗೀತೆಯ ಆಧಾರದಿಂದಲೇ ಸ್ಪಷ್ಟಪಡಿಸುವುದೇನೆಂದರೆ ಗೀತೆಯ ಜ್ಞಾನವನ್ನು ನೀಡಿದಾತನಿಗಿಂತ ಭಿನ್ನನಾದ ಪರಮಾತ್ಮನೊಬ್ಬನಿದ್ದಾನೆ. ಗೀತೆಯ 2ನೇ ಅಧ್ಯಾಯದ 12ನೇ ಶ್ಲೋಕ, 4ನೇ ಅಧ್ಯಾಯದ 5ನೇ ಶ್ಲೋಕ, 10ನೇ ಅಧ್ಯಾಯದ 2ನೇ ಶ್ಲೋಕದಲ್ಲಿ ಗೀತೆಯ ಜ್ಞಾನ ನೀಡಿದಾತನು ಸ್ಪಷ್ಟಪಡಿಸುವುದೇನೆಂದರೆ, ನನ್ನ ಜನ್ಮವಾಗಿದೆ, ನನಗೆ ಜನನ-ಮರಣವಿದೆ, ನನ್ನ ಹಾಗೂ ಅರ್ಜುನನ ಅನೇಕ ಜನ್ಮಗಳಾಗಿವೆ. ನಾನೂ ಸಹ ನಶ್ವರನು. ಗೀತೆಯ 2ನೇಯ ಅಧ್ಯಾಯದ 17ನೇ ಶ್ಲೋಕದಲ್ಲಿ ಯಾವ ಪರಮಾತ್ಮನು ಎಲ್ಲರನ್ನೂ ಸೃಷ್ಟಿಸಿದ್ದಾನೋ, ಯಾರನ್ನು ಸಾಯಿಸಲು ಸಾಧ್ಯವಿಲ್ಲವೋ, ಅವನೇ ಅವಿನಾಶಿ ಎಂದು ತಿಳಿ ಎಂದು ಹೇಳಲಾಗಿದೆ. ಆ ಅವಿನಾಶಿ ಪರಮಾತ್ಮನ ಇದು ಒಂದು ಪ್ರಮಾಣ.
* ಆಧಾರ ಸಂ. 2 - ಭಗವದ್ಗೀತೆಯ 15ನೇ ಅಧ್ಯಾಯದ 16, 17ನೇ ಶ್ಲೋಕದಲ್ಲಿ ಮೂವರು ಪುರುಷರನ್ನು (ಪ್ರಭು) ವಿವರಿಸಲಾಗಿದೆ. ಗೀತೆಯ 15ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಹೇಳಿದ್ದಾರೆ ಈ ಲೋಕದಲ್ಲಿ ಇಬ್ಬರು ಪುರುಷರು ಪ್ರಸಿದ್ಧರು, ಅವರು ಕ್ಷರ ಪುರುಷ ಮತ್ತು ಅಕ್ಷರ ಪುರುಷ ಎಂದು ಹೇಳಲಾಗಿದೆ. ಇವರಿಬ್ಬರೂ ಪ್ರಭುಗಳು ಮತ್ತು ಅವರಲ್ಲಿರುವ ಸಮಸ್ತ ಜೀವಿಗಳು ನಶ್ವರರು, ಆತ್ಮವಂತೂ ಅಮರ ಎಂದು ಹೇಳಲಾಗಿದೆ. ಗೀತೆಯ 15ನೇ ಅಧ್ಯಾಯದ 17ನೇ ಶ್ಲೋಕದಲ್ಲಿ ಉತ್ತಮ ಪುರುಷ ಅರ್ಥಾತ್ ಪುರುಷೋತ್ತಮನು ಬೇರೆಯವನೇ ಇದ್ದಾನೆ, ಅವನನ್ನು ಪರಮಾತ್ಮ ಎಂದು ಕರೆಯಲಾಗಿದೆ. ಅವನು ಮೂರೂ ಲೋಕಗಳಲ್ಲಿ ಪ್ರವೇಶಿಸಿ, ಎಲ್ಲರನ್ನೂ ಪೋಷಿಸುತ್ತಾನೆ. ಅವನೇ ವಾಸ್ತವವಾಗಿ ಅವಿನಾಶಿ ಎಂದು ಹೇಳಲಾಗಿದೆ.
ಗೀತೆಯ 7ನೇ ಅಧ್ಯಾಯದ 29ನೇ ಶ್ಲೋಕದಲ್ಲಿ ಹೇಳಿರುವುದೇನೆಂದರೆ, ಸಾಧಕನು ಕೇವಲ
ಮುಪ್ಪು (ವೃದ್ಧಾಪ್ಯ) ಮರಣ (ಮೃತ್ಯು), ದುಃಖದಿಂದ ಬಿಡುಗಡೆ ಹೊಂದಲು ಪ್ರಯತ್ನಿಸುತ್ತಾನೆ. ಅವನಿಗೆ ತತ್ ಬ್ರಹ್ಮ ಗೊತ್ತು ಹಾಗೂ ಎಲ್ಲಾ ಕರ್ಮಗಳ ಮತ್ತು ಸಂಪೂರ್ಣ ಆಧ್ಯಾತ್ಮದ ಬಗ್ಗೆ ಅರಿವಿದೆ.
ಗೀತೆಯ 8ನೇ ಅಧ್ಯಾಯದ 1ನೇ ಶ್ಲೋಕದಲ್ಲಿ ಅರ್ಜುನನು ಕೇಳುತ್ತಾನೆ, 'ತತ್ ಬ್ರಹ್ಮ' ಎಂದರೆ ಏನು? ಗೀತೆಯ ಜ್ಞಾನದಾತನು 8ನೇ ಅಧ್ಯಾಯದ 3ನೇ ಶ್ಲೋಕದಲ್ಲಿ ಉತ್ತರಿಸಿದ್ದಾನೆ, 'ಪರಮ ಅಕ್ಷರ ಬ್ರಹ' ಅಂದರೆ ಪರಮ ಅಕ್ಷರ ಪುರುಷ, (ಪುರುಷ ಎನ್ನಿ ಅಥವಾ ಬ್ರಹ್ಮ) ಗೀತೆಯ 15ನೇ ಅಧ್ಯಾಯದ 17ನೇ ಶ್ಲೋಕದಲ್ಲಿ 'ಉತ್ತಮ ಪುರುಷಃ ತು ಅನ್ಯ ಪರಮಾತ್ಮ ಇತಿ ಉದಾಹೃತ!' ಎಂದು ಹೇಳಿದೆ. ಅವನು ಪರಮ ಅಕ್ಷರ ಬ್ರಹ್ಮನು, ಅವನನ್ನೇ ಪುರುಷೋತ್ತಮನೆಂದು ಕರೆದಿದ್ದಾರೆ.
Comments
Post a Comment