ಸಂದೇಹ ಪರಿಪಾರ
ಗೀತೆಯ 5ನೇ ಅಧ್ಯಾಯದ 18ನೇ ಶ್ಲೋಕದಲ್ಲಿ ಗೀತೆಯ ಜ್ಞಾನವನ್ನು ನೀಡಿದಾತನು ಹೇಳಿರುವುದೇನೆಂದರೆ, “ನಾನು ಆ ನನ್ನ 21 ಬ್ರಹ್ಮಾಂಡಗಳಲ್ಲಿ ಇರುವ ಎಲ್ಲಾ ಜೀವಿಗಳಿಗಿಂತ ಉತ್ತಮನು ಅಂದರೆ ಶಕ್ತಿವಂತನು, ಆದ್ದರಿಂದ ಲೋಕವೇದ ಅಂದರೆ ದಂತಕಥೆಯ ಆಧಾರದ ಮೇಲೆ ನಾನು ಪುರುಷೋತ್ತಮನೆಂದು ಪ್ರಸಿದ್ಧಿಯಾಗಿದ್ದೇನೆ.” ವಾಸ್ತವವಾಗಿ ಪುರುಷೋತ್ತಮನು ಯಾರೆಂದು ಗೀತೆಯ 15ನೇ ಅಧ್ಯಾಯದ 17ನೇ ಶ್ಲೋಕದಲ್ಲಿ ಸ್ಪಷ್ಟಪಡಿಸಿದೆ. ಉತ್ತಮ ಪುರುಷ ಅಂದರೆ ಪುರುಷೋತ್ತಮನು ಕ್ಷರ ಪುರುಷ (ಗೀತೆಯಜ್ಞಾನ ನೀಡಿದವನು ಮತ್ತು ಅಕ್ಷರ ಪುರುಷ (ಏಳು ಶಂಖ ಬ್ರಹ್ಮಾಂಡದ ಸ್ವಾಮಿನಿಗಿಂತ ಭಿನ್ನವಾದವನು, ಅವನೇ ನಿಜವಾದ ಪರಮಾತ್ಮನು. ಅವನು ಎಲ್ಲರನ್ನು ಪಾಲಿಸಿ ಪೋಷಿಸುವವನು. ವಾಸ್ತವವಾಗಿ ಅವನೇ ಅವಿನಾಶಿಯು ಆ ಪರಮ ಅಕ್ಷರ ಬ್ರಹ್ಮನು ಅಸಂಖ್ಯಾತ ಬ್ರಹ್ಮಾಂಡಗಳಿಗೆ ಒಡೆಯನು, ಎಲ್ಲರ ಸೃಷ್ಟಿಕರ್ತನು, ಕುಲದ ಒಡೆಯನು ಅಂದರೆ ಪರಮಾತ್ಮನು.
ಪ್ರಶ್ನೆ 9 - ಅಕ್ಷರ ಎಂದರೆ ಅವಿನಾಶಿ ಎಂದರ್ಥ. ಆದರೆ ನೀವು ಗೀತೆಯ 15ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಅಕ್ಷರ ಪುರುಷನನ್ನು 'ನಪ್ಪರ' ನೆಂದು ಹೇಳಿದ್ದೀರಾ ದಯವಿಟ್ಟು ಸ್ಪಷ್ಟಪಡಿಸಿ
ಉತ್ತರ: - 'ಅಕ್ಷರ' ಎಂದರೆ ಅವಿನಾಶಿ ಎಂದರ್ಥ, ಇದು ಸತ್ಯ. ಆದರೆ, ಪ್ರಸಂಗಕ್ಕೆ ತಕ್ಕಂತೆ ಅರ್ಥ ಬದಲಾಗುವುದು, ಗೀತೆಯ 15ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಜ್ವರ ಮತ್ತು ಅಕ್ಷರ ಎಂಬ ಇಬ್ಬರು ಪುರುಷರು (ಪ್ರಭುಗಳು) ಈ ಲೋಕದಲ್ಲಿದ್ದಾರೆ. ಇವರಿಬ್ಬರೂ ಹಾಗೂ ಅವರ ಒಳಗೆ ಇರುವ ಎಲ್ಲಾ ಜೀವಿಗಳು ನಶ್ವರರು, ಆತ್ಮ ಎಂದಿಗೂ ಸಾಯುವುದಿಲ್ಲ ಎಂದೆಲ್ಲಾ ಹೇಳಲಾಗಿದೆ. ನಂತರ ಗೀತೆಯ 15ನೇ ಅಧ್ಯಾಯದ 17ನೇ ಶ್ಲೋಕದಲ್ಲಿ, ಪುರುಷೋತ್ತಮನು ಮೇಲೆ ತಿಳಿಸಿದ ಈ ಇಬ್ಬರು ಪುರುಷರಿಗಿಂತ ಭಿನ್ನನು, ಅವನೇ ಅವಿನಾಶಿ, ಅವನೇ ಎಲ್ಲರನ್ನು ಪಾಲನೆ-ಪೋಷಣೆ ಮಾಡುವವನು ಎಂದು ಹೇಳಲಾಗಿದೆ. ಗೀತೆಯ 8ನೇ ಅಧ್ಯಾಯದ 3ನೇ ಶ್ಲೋಕದಲ್ಲಿ 'ತತ್ ಬ್ರಹ್ಮ' ನನ್ನು 'ಪರಮ ಅಕ್ಷರ ಬ್ರಹ್ಮ' ಎಂದು ಹೇಳಲಾಗಿದೆ. ಅಕ್ಷರ ಎಂದರೆ ಅವಿನಾಶಿ ಎಂದರ್ಥ. ಆದರೆ ಇಲ್ಲಿ ಪರಮ ಅಕ್ಷರ ಬ್ರಹ್ಮ ಎಂದು ಹೇಳಲಾಗಿದೆ. ಅಕ್ಷರದ ಮುಂದೆ ಪರಮ ಅಕ್ಷರ ಬ್ರಹ್ಮ ನಿದ್ದಾನೆ. ಆದ್ದರಿಂದ ಅವನು ಅವಿನಾಶಿ ಎನ್ನುವುದು ಸ್ಪಷ್ಟವಾಗುತ್ತದೆ.
ಆಧಾರ: - ಬ್ರಹ್ಮಾನ ಆಯುವನ್ನು ನೂರು ವರ್ಷ ಎಂದು ಹೇಳಲಾಗುತ್ತದೆ, ದೇವತೆಗಳ ವರ್ಷ ಎಷ್ಟು ಸಮಯದ್ದಾಗಿದೆ?
ಉತ್ತರ: - ಕೇಳು! ನಾಲ್ಕು ಯುಗ (ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಹಾಗೂ ಕಲಿಯುಗ) ಇದು ಒಂದು ಚತುರ್ಯುಗವಾಗುತ್ತದೆ. ಇದರಲ್ಲಿ ಮನುಷ್ಯರ 43,20,000 (ನಲ್ವತ್ತಮೂರು ಲಕ್ಷದ ಇಪ್ಪತ್ತು ಸಾವಿರ) ವರ್ಷವಾಗುತ್ತದೆ. ಈ ರೀತಿ ಉಂಟಾದ 1008 ಚತುರ್ಯುಗಗಳು ಬ್ರಹ್ಮಾನಿಗೆ ಒಂದು ದಿನ, ಹಾಗೂ ಇಷ್ಟೇ ಚತುರ್ಯುಗಗಳು ರಾತ್ರಿಯೂ ಆಗುತ್ತವೆ. ಅಂದರೆ 30 ಹಗಲು ಹಾಗೂ 30 ರಾತ್ರಿ ಸೇರಿದರೆ 1 ತಿಂಗಳಾಗುತ್ತದೆ. 12 ತಿಂಗಳು ಸೇರಿದರೆ 1 ವರ್ಷವಾಗುತ್ತದೆ. ಅಂತಹ ನೂರು ವರ್ಷಗಳು ಬ್ರಹ್ಮಾನ ಆಯುಷ್ಯವಾಗುತ್ತದೆ. ಹೀಗೆ ವಿಷ್ಣುವಿನ ಆಯಸ್ಸು ಬ್ರಹ್ಮಾನಿಗಿಂತ 7 ಪಟ್ಟು ಜಾಸ್ತಿ ಇದೆ ಅಂದರೆ 700 ವರ್ಷಗಳು, ಶಂಕರನ ಅವಧಿಯು ವಿಷ್ಣುವಿನ ಅವಧಿಗಿಂತ 7 ಪಟ್ಟು ಅಧಿಕವಾಗಿರುತ್ತದೆ. ಅಂದರೆ 4,900 ವರ್ಷಗಳು, ಬ್ರಹ್ಮ (ಕ್ಷರ ಪುರುಷನ ಆಯುಷ್ಯ 70 ಸಾವಿರ ಅಂದರೆ ಶಂಕರನ ಮೃತ್ಯುವಿನ ನಂತರ ಒಬ್ಬ ಬ್ರಹ್ಮನ ಮೃತ್ಯುವಾಗುತ್ತದೆ. ಅಂದರೆ ಕ್ಷರ ಪುರುಷನ ಮೃತ್ಯುವಾಗುತ್ತದೆ ಎಂದಾಯಿತು. ಇಷ್ಟೇ ಸಮಯದ ಒಂದು ಯುಗ ಅಕ್ಷರ ಪುರುಷನದ್ದಾಗಿದೆ.
ಅಕ್ಷರ ಪುರುಷನ ಆಯುಷ್ಯವನ್ನು ಗೀತೆಯ 8ನೇ ಅಧ್ಯಾಯದ 17ನೇ ಶ್ಲೋಕದಲ್ಲಿ ಹೀಗೆಂದು ಬರದಿದ
ರಾತ್ರಿಮ್ ಯುಗ ಸಹಂಸಾಂತಮ್ ಶೇ. ಅಹೋರಾತ್ರಾ ವಿದಃ ಜನಾ | (17) ಅನುವಾದ:- ಇಲ್ಲಿಯವರೆಗೆ ಎಲ್ಲಾ ಅನುವಾದಕರು ಸರಿಯಾದ ಅನುವಾದವನ್ನು ಮಾಡಿರುವುದಿಲ್ಲ, ಎಲ್ಲರು ಬ್ರಹ್ಮಾನಿಗೆ ಒಂದು ಸಾವಿರ ಚತುರ್ಯುಗ ಎಂದು ಬರೆದಿದ್ದಾರೆ. ಇದು ತಪ್ಪು (ಹೆಚ್ಚಿನ ಮಾಹಿತಿಗಾಗಿ ಇದೇ ಪುಸ್ತಕದ ಕೊನೆಯಲ್ಲಿ ಗೀತೆಯ ಶ್ಲೋಕಗಳ ಅನುವಾದದ ಪ್ರತಿ ಲಿಪಿಗಳನ್ನು ನೀಡಲಾಗಿದೆ. ಇದು ಗೋರಖಪುರದ ಗೀತಾ ಪ್ರೆಸ್ನಿಂದ ಪ್ರಕಾರಗೊಂಡಿದೆ.)
ಮೂಲ ಪಾಠದಲ್ಲಿ ಸಹಸ್ರ ಚತುರ್ಯುಗವೆಂದು ಬರೆಯದೆ ಸಹಸ್ರ ಯುಗ ಎಂದು ಬರೆದಿದೆ. ಆದ್ದರಿಂದ ಗೀತೆಯ 8ನೇ ಅಧ್ಯಾಯದ 17ನೇ ಶ್ಲೋಕದ ಅನುವಾದ ಹೀಗಿರುತ್ತದೆ :- [ಬ್ರಹ್ಮಣ:] ಅಕ್ಷರ ಪುರುಷನ (ಯತ್) ಒಂದು ದಿನವು [ಅಹಃ] ಅದು ಒಂದು ಸಾವಿರ ವರ್ಷದ ಅವಧಿಯದ್ದಾಗಿದೆ [ಸಹಸ್ರ ಯುಗ ಪ್ರಯಂತಂ] ಹಾಗೂ ರಾತ್ರಿಯನ್ನು [ರಾಂ] ಸಹ [ಯುಗ ಸಹಸ್ರಾಂತಂ] ಒಂದು ಸಾವಿರ ಯುಗದ ಅವಧಿಯ ಯಾವ ಪುರುಷರು (ಎಧು:) ತಿಳಿದಿರುತ್ತಾರೋ, (3) ಆ (ಜನಾ) ವ್ಯಕ್ತಿಗಳು (ಅಹೋ ರಾತ್ರಿ) ಹಗಲು-ಇರುಳನ್ನು (ವಿದ:) ತಿಳಿದವರಾಗಿರುತ್ತಾರೆ.
ಭಾವಾರ್ಥ:- ಈ ಶ್ಲೋಕದಲ್ಲಿ 'ಬ್ರಹ್ಮಾ' ಎನ್ನುವ ಶಬ್ದವು ಮೂಲ ಪಾಠದಲ್ಲಿಲ್ಲ. 'ಚತುರ್ಯುಗ ಎನ್ನುವ ಶಬ್ದವು ಸಹ ಮೂಲ ಪಾಠದಲ್ಲಿಲ್ಲ. ಇದರಲ್ಲಿ 'ಬ್ರಹ್ಮಣ:' ಶಬ್ದವಿದೆ. ಅವರ ಅರ್ಥವು ಸಚ್ಚಿದಾನಂದ ಬ್ರಹ್ಮ ಅಂದರೆ ಪರಮ ಅಕ್ಷರ ಬ್ರಹ್ಮ. ಆದರೆ ಪ್ರಸಂಗಕ್ಕೆ ಅನುಗುಣವಾಗಿ ಬ್ರಹ್ಮಣ: ಶಬ್ದದ ಅರ್ಥವು ಬ್ರಹ್ಮನನ್ನು ಬಿಟ್ಟು ಇನ್ನೊಬ್ಬ ಪರಬ್ರಹ್ಮ [ಅಕ್ಷರ ಬ್ರಹ್ಮ ಎಂದೂ ಆಗುತ್ತದೆ.
ಆಧಾರ: - ಗೀತೆಯ 17ನೇ ಅಧ್ಯಾಯದ 23ನೇ ಶ್ಲೋಕದಲ್ಲಿ ಬ್ರಹ್ಮಣ: ಶಬ್ದಕ್ಕೆ ಸಚ್ಚಿದಾನಂದ ಘನ ಬ್ರಹ್ಮವೆಂದು ಬರೆದಿದ್ದಾರೆ. ಇಲ್ಲಿ ಅನುವಾದಕರು ಸರಿಯಾಗಿ ಬರೆದಿದ್ದಾರೆ. 8ನೇ ಅಧ್ಯಾಯದ 17ನೇ ಶ್ಲೋಕದಲ್ಲಿ 'ವಯಸ್ಸಿಗೆ ಸಂಬಂಧಿಸಿದ ಪ್ರಸಂಗವಿದೆ, ಇದರಲ್ಲಿ ಬ್ರಹ್ಮಣ: ಎಂಬುದಕ್ಕೆ ಅಕ್ಷರ ಬ್ರಹ್ಮ ಎಂದು ಅರ್ಥವಾಗುತ್ತದೆ. ಇಲ್ಲಿ ಅಕ್ಷರ ಬ್ರಹ್ಮನ ಆಯುಷ್ಯದ ಮಾಹಿತಿ ಇದೆ. ಅಕ್ಷರ ಬ್ರಹ್ಮನ ಒಂದು ದಿನ, ಒಂದು ಸಾವಿರ ಯುಗಕ್ಕೆ ಸಮಾನ (ಎಪ್ಪತ್ತು ಸಾವಿರ (70,000) ಶಂಕರರು ಮರಣ ಹೊಂದಿದ ನಂತರ ಒಬ್ಬ ಕ್ಷರ ಪುರುಷನ ಮರಣವಾಗುತ್ತದೆ. ಆ ಸಮಯವು ಒಂದು ಯುಗ ಅಕ್ಷರ ಪುರುಷನದ್ದಾಗಿದೆ. ಹೀಗೆ ಆದ ಒಂದು ಸಾವಿರ (1,000) ಯುಗಗಳ ಅಕ್ಷರ ಪುರುಷನ ಹಗಲು ಮತ್ತು ಅಷ್ಟೇ ರಾತ್ರಿಗಳೂ ಆಗುತ್ತವೆ. ಇಂತಹ ಮೂವತ್ತು ಹಗಲು-ರಾತ್ರಿಗಳು ಸೇರಿದರೆ ಒಂದು ತಿಂಗಳಾಗುತ್ತದೆ. ಹಾಗೆಯೇ ಅಕ್ಷರ ಪುರುಷನ ಹನ್ನೆರಡು ತಿಂಗಳು ಒಂದು ವರ್ಷವಾಗುತ್ತದೆ. ಮತ್ತು ಇಂತಹ ನೂರು ವರ್ಷಗಳು ಅಕ್ಷರ ಪುರುಷನ ಆಯುಷ್ಯವಾಗಿದೆ. ಇದಾದ ನಂತರ ಅವನ ಮರಣವಾಗುತ್ತದೆ, ಆದ್ದರಿಂದ ಗೀತೆಯ 15ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಕ್ಷರ ಪುರುಷ ಮತ್ತು ಅಕ್ಷರ ಪುರುಷ ಇವರಿಬ್ಬರನ್ನೂ ನಶ್ವರ'ರೆಂದು ಹೇಳಲಾಗಿದೆ. ಗೀತೆಯ 15ನೇ ಅಧ್ಯಾಯದ 17ನೇ ಶ್ಲೋಕದಲ್ಲಿ ಹೇಳಿರುವ ಅವಿನಾಶಿ ಪರಮಾತ್ಮನು ಶಾಶ್ವತನು. ಎಲ್ಲಾ ಪ್ರಾಣಿಗಳ ಮರಣಾ ನಂತರವು ಸಹ ಈ ಪರಮಾತ್ಮನು ನಾಶವಾಗುವುದಿಲ್ಲ.
ಆಧಾರ: - ಗೀತೆಯ 8ನೇ ಅಧ್ಯಾಯದ 20ರಿಂದ 22ನೇ ಶ್ಲೋಕದಲ್ಲಿ ಸ್ಪಷ್ಟವಾಗಿ ಹೇಳಿರುವುದೇನೆಂರೆ, 'ಈ ಪರಮ ಅಕ್ಷರ ಬ್ರಹ್ಮನು ಎಂದೆಂದಿಗೂ ಮರಣವನ್ನಪ್ಪುವುದಿಲ್ಲ'
ಉದಾ: (1) ಬಿಳಿ ಮಣ್ಣಿನಿಂದ ಮಾಡಿದ ತಟ್ಟೆ-ಲೋಟಗಳು ಕೈಯಿಂದ ಜಾರಿ ನೆಲ ಬಿದ್ದು ಮುರಿದು ಹೋಗುತ್ತವೆ, ಅಂದರೆ ನಾಶವಾಗುತ್ತವೆ. ಇದನ್ನು ಕ್ಷರ ಎನ್ನುತ್ತಾರೆ. ಅಂದರೆ ಈ ಸ್ಥಿತಿಯನ್ನು ಕ್ಷರ ಪುರುಷನೆಂದು ತಿಳಿದುಕೊ
ಉದಾ: (2) ಸ್ಟೀಲಿನಿಂದ ಮಾಡಿದ ತಟ್ಟೆ-ಲೋಟಗಳು ಬಹಳ ಕಾಲದವರೆಗೆ ಬಾಳಿಕೆ ಬರುತ್ತವೆ. ನಂತರ ತುಕ್ಕು ಹಿಡಿದು ನಾಶವಾಗುತ್ತವೆ. ಅವು ಬಹಳ ಬೇಗ ಮುರಿಯುವುದಿಲ್ಲ. ಹಾಗೂ ನಾಶವಾಗುವುದಿಲ್ಲ. ಮಣ್ಣಿನ ಪಾತ್ರೆಗಳಿಗೆ ಹೋಲಿಸಿದರೆ ಸ್ಟೀಲ್ ಪಾತ್ರೆಗಳು: ಶಾಶ್ವತ ಎನ್ನುವ ಭಾವನೆ ಬರುತ್ತದೆ. ಆದರೆ ಅವು ಸಹ ನಾಶವಾಗುತ್ತವೆ. ಅವುಗಳ ಸ್ಥಿತಿಯನ್ನು ಅಕ್ಷರ ಪುರುಷ ಎಂದು ತಿಳಿ, ಆದ್ದರಿಂದ ಪ್ರಸಂಗಕ್ಕೆ ತಕ್ಕಂತೆ ಅಕ್ಷರ ಅರ್ಥ ನಶ್ವರವಾಗುತ್ತದೆ ವಾಸ್ತವಿಕವಾಗಿ ಅಕ್ಷರ ಅರ್ಥ ಅವಿನಾಶಿಯಾಗುತ್ತದೆ,
ಉದಾ: (1) ಚಿನ್ನದಿಂದ ಮಾಡಿದ ತಟ್ಟೆ-ಲೋಟಗಳು ಎಂದಿಗೂ ನಾಶವಾಗುವುದಿಲ್ಲ. ಅವುಗಳಿಗೆ ತುಕ್ಕು ಹಿಡಿಯುವುದಿಲ್ಲ. ವಾಸ್ತವವಾಗಿ ಇವು ಅವಿನಾಶಿ, ಈ ಸ್ಥಿತಿಯನ್ನು ಪರಮ ಅಕ್ಷರ ಬ್ರಹ್ಮ ಎಂದು ತಿಳಿ, ಆದ್ದರಿಂದ ಪ್ರಸಂಗಕ್ಕೆ ತಕ್ಕಂತೆ ಅಕ್ಷರ ಅರ್ಥ ನಶ್ವರವಾಗುತ್ತದೆ ವಾಸ್ತವಿಕವಾಗಿ ಅಕ್ಷರ ಅರ್ಥ ಅವಿನಾಶಿಯಾಗಿದೆ.
ಉದಾಹರಣೆಗಾಗಿ ಗೀತೆಯ 8ನೇ ಅಧ್ಯಾಯದ 11ನೇ ಶ್ಲೋಕದಲ್ಲಿ ಇರುವ ಮೂಲ
ಪಾಠವು ಹೀಗಿದೆ. ಯತ್ ಅಕ್ಷರಮ್ ವೇದ್ ವಿದಃ ವದಂತಿ ವಿಶಂತಿಯತ್ ಯತಯಃ ಭೀತರಾಗಾ ಯತ್ ಇಚ್ಚಂತಃ ಬ್ರಹ್ಮಚರ್ಯಮ್' ಚರಂತಿ ತತ್ ತೇ ಪದಮ್ ಸಂಗ್ರಹೇಣ
ಪ್ರವಕ್ಷ್ಯ (11) ಅನುವಾದ:- ಈ ಶ್ಲೋಕದಲ್ಲಿ 'ಅಕ್ಷರ' ಎಂದರೆ ಅವಿನಾಶಿ ಪರಮಾತ್ಮ ಎಂದಿದೆ. "ವೇದ ವಿದಃ] ತತ್ವದರ್ಶಿ ಸಂತನು ಅಂದರೆ ವೇದವನ್ನು ತಿಳಿದ ಮಹಾತ್ಮ [ಯತ್) ನನ್ನು [ಅಕ್ಷರು) ಅವಿನಾಶಿ (ವದಂತಿ) ಎಂದು ಕರೆಯುತ್ತಾರೆ. [ಯತಯಃ] ಸಾಧನೆಯಲ್ಲಿ ನಿರತರಾದ [ಭೀತರಾಗ ಆಸಕ್ತಿ ರಹಿತ ಸಾಧಕನು [ಯತ್) ಯಾವ ಲೋಕಕ್ಕೆ [ವಿಶಂತಿ] ಪ್ರವೇಶ ಮಾಡುತ್ತಾನೋ ಮತ್ತು [ಯತ್] ಯಾವ ಪರಮಾತ್ಮನನ್ನು [ಇಚ್ಚಂತಹ) ಇಷ್ಟ ಪಡುವ ಸಾಧಕನು (ಬ್ರಹ್ಮಚರ್ಯ೦) ಬ್ರಹ್ಮಚರ್ಯ ಎಂದರೆ ಶಿಷ್ಯ ಪರಂಪರೆಯನ್ನು [ಚರಂತಿ] ಆಚರಿಸುತ್ತಾನೆಯೋ, [ತತ್) ಆ [ಪದಂ] ಪದವಿಯನ್ನು (ತೆ) ನಿನಗಾಗಿ ನಾನು (ಸಂಗ್ರಹೇಣ] ಸಂಕ್ಷೇಪದಲ್ಲಿ (ಪ್ರವಕ್ಷೇ] ಹೇಳುತ್ತೇನೆ . ಈ ಶ್ಲೋಕದಲ್ಲಿ ಅಕ್ಷರದ ಅರ್ಥವು ಅವಿನಾಶಿ ಪರಮಾತ್ಮ ಎಂದಾಗಿದೆ. ಇದು ಸರಿಯಾಗಿದೆ. ಕಬೀರ ಜಿ ಅವರು ಸೂಕ್ಷ್ಮವೇದದಲ್ಲಿ ಹೀಗೆಂದಿದ್ದಾರೆ :-
ಗುರು ಏನ್ ಕಾಹೂ ನ ಬಾಯಾ ಜಾನಾ, ಜೋಂ ಲೋಥಾ ಬಾಸ್ ಛಿಡೇ ಮೂಡ್ ಕಿಸಾನಾ 1
ಗುರು ಬಿನ್ ವೇದ್ ಪತ್ರ ಜೋ ಪಾಣೀ, ಸಮಝೇ ನಾ ಸಾರ್ ರ ಅಜ್ಞಾನೀ |
ಪ್ರಶ್ನೆ10:- ನೀವು ಯಾವುದನ್ನು ಪೂರ್ಣ ಮೋಕ್ಷವೆಂದು ಭಾವಿಸುತ್ತೀರಿ? ಉತ್ತರ; - ಗೀತೆಯ 15ನೇ ಅಧ್ಯಾಯದ 4ನೇ ಶ್ಲೋಕದಲ್ಲಿ ಈ ರೀತಿಯಾದ ವರ್ಣನೆ ಇದೆ, ತತ್ವದರ್ಶಿ ಸಂತನ, ಪ್ರಾಪ್ತಿಯಾದ ನಂತರ ತತ್ವಜ್ಞಾನವೆಂಬ ಅಸ್ತ್ರದಿಂದ ಆಜ್ಞಾನವನ್ನು ಹೊಡೆದೋಡಿಸಿ ಅಂದರೆ ಒಳ್ಳೆಯ ಚಾನವನ್ನು ಪಡೆದುಕೊಂಡು ತದನಂತರ ಪರಮೇಶ್ವರನ [ಸತ್ಯಲೋಕದ] ಆನ್ವೇಷಣೆಯನ್ನು ಮಾಡಬೇಕು. ಅಲ್ಲಿಗೆ ಹೋದ ಸಾಧಕನು ಮರಳಿ ಈ ಪ್ರಪಂಚಕ್ಕೆ ಬರುವುದಿಲ್ಲ. ಅಂದರೆ ಅವನಿಗೆ ಪುನರ್ಜನ್ಮವಿರುವುದಿಲ್ಲ. ಯಾವ ಪರಮಾತ್ಮನು ಎಲ್ಲ ರಚನೆ ಮಾಡಿದ್ದಾನೊ ಕೇವಲ ಅವನ ಭಕ್ತಿ ಪೂಜೆ ಮಾಡಬೇಕು, ಯಾರಿಗೆ ಪುನರ್ಜನ್ಮವಿರುವುದಿಲ್ಲವೋ ಅದನ್ನು ಪೂರ್ಣ ಮೋಕ್ಷವೆಂದು ಕರೆಯುತ್ತಾರೆ. ಅವನಿಗೆ ಜನನ- ಮರಣವೆಂಬ ಚಕ್ರವು ಎಂದಿಗೂ ಬಾಧಿಸುವುದಿಲ್ಲ.
ಪ್ರಶ್ನೆ 11 - ಗೀತೆಯ ಜ್ಞಾನದಾತನಾದ ಬ್ರಹ್ಮನನ್ನು ಆರಾಧಿಸುವುದರಿಂದ ಪೂರ್ಣ ಮೋಕ್ಷವು ಪ್ರಾಪ್ತಿಯಾಗುವುದೇ?
ಉತ್ತರ: - ಇಲ್ಲ
ಪ್ರಶ್ನೆ 12 :- ಗೀತೆಯ 8 ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಗೀತೆಯ ಜ್ಞಾನದಾತನು, “ಹೇ ಅರ್ಜುನಾ, ನನ್ನನ್ನು ಹೊಂದಿದ ಮೇಲೆ ಪುನರ್ಜನ ಇರುವುದಿಲ್ಲ ಎಂದು ಹೇಳಿದ್ದಾನೆ. ಎನ್ನುವುದಕ್ಕೆ ಆಧಾರವಿದೆ. ಬ್ರಹ್ಮನನ್ನು ಆರಾಧಿಸುವುದರಿಂದ ಪೂರ್ಣ ಮೋಕ್ಷವು ಸಾಧ್ಯವಿಲ್ಲವೆಂದು ನೀವು ಹೇಗೆ ಹೇಳುವಿರಿ?'
ಉತ್ತರ :- ಶ್ರೀದೇವಿ ಮಹಾಪುರಾಣದ (ಗೀತಾ ಪ್ರೆಸ್ ಗೋರಖ್ ಪುರದಿಂದ ಪ್ರಕಾಶಿತಗೊಂಡು 7ನೇ ಶೃಂದದ 562-563ನೇ ಪುಟದಲ್ಲಿ ಇರುವ ಆಧಾರವೇನೆಂದರೆ ಶ್ರೀ ದೇವಿಯು ಹಿಮಾಲಯ ರಾಜನಿಗೆ ಉಪದೇಶವನ್ನು ನೀಡುತ್ತಾ ಹೀಗೆಂದಿದ್ದಾಳೆ, 'ಹೇ ರಾಜ! ಎಲ್ಲಾ ವಿಷಯಗಳನ್ನು ಬಿಟ್ಟು, ನನ್ನನ್ನೂ ಸಹ ಆರಾಧಿಸುವುದನ್ನು ಬಿಟ್ಟು ಕೇವಲ 'ಓಂ' ಎಂಬ ನಾಮಜಪವನ್ನು ಮಾಡು ಬ್ರಹ್ಮ ಪ್ರಾಪ್ತಿಗೆ ಇದೊಂದೇ ಮಂತ್ರವಾಗಿದೆ. ಇದರಿಂದ ಪ್ರಪಂಚದ ಇನ್ನೊಂದು ಕಡೆಯಿರುವ ಬ್ರಹ್ಮನನ್ನು ನೀನು ಪಡೆಯಬಹುದು, ಆಗ ನಿನ್ನ ಉದ್ಧಾರವಾಗುತ್ತದೆ, ಅವನು ಬ್ರಹ್ಮಲೋಕದಂತಿರುವ ದಿವ್ಯ ಆಕಾರದಲ್ಲಿರುತ್ತಾನೆ.'
ಭಾವಾರ್ಥವೇನೆಂದರೆ ಬ್ರಹ್ಮ ಸಾಧನೆಗೆ ಕೇವಲ 'ಓಂ' ಎಂಬ ಒಂದು ನಾಮಜಪವಿದೆ. ಇದರಿಂದ ಬ್ರಹ್ಮನ ಪ್ರಾಪ್ತಿಯಾಗುತ್ತದೆ. ಆ ಸಾಧಕನು ಬ್ರಹ್ಮ ಲೋಕಕ್ಕೆ ಹೊರಟು ಹೋಗುತ್ತಾನೆ. ಇದೇ ಗೀತೆಯ 8ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಹೇಳಿರುವುದೇನೆಂದರೆ ಬ್ರಹ್ಮ ಲೋಕದಿಂದ ಹಿಡಿದು ಎಲ್ಲಾ ಲೋಕಗಳು ಪುನರಾವರ್ತನೆಯ ಚಕ್ರದಲ್ಲಿವೆ. ಅಂದರೆ ಬ್ರಹ್ಮಲೋಕಕ್ಕೆ ಹೋದ ಸಾಧಕನಿಗೂ ಸಹ ಪುನರ್ಜನವಿರುತ್ತದೆ. ಬ್ರಹ್ಮನನ್ನು ಆರಾಧಿಸುವುದರಿಂದ ಪೂರ್ಣ ಮೋಕ್ಷವು ಪ್ರಾಪ್ತಿಯಾಗುವುದಿಲ್ಲ. ಗೀತೆಯ 8ನೇ ಅಧ್ಯಾಯದ 16ನೇ ಶ್ಲೋಕದಲ್ಲಿ (ಗೀತಾಪ್ರೆಸ್ ಗೋರಖಪುರ ಪ್ರಕಟಿಸಿದ ಗೀತಾ ಮತ್ತು ಬೇರೆ ಪ್ರಕಾಶನದ ಗೀತಾ) ಇದನ್ನು ತಪ್ಪಾಗಿ ಅನುವಾದಿಸಿದ್ದಾರೆ.
ಗೀತೆಯ 8ನೇ ಅಧ್ಯಾಯದ 16ನೇ ಶ್ಲೋಕ :-
ಆ ಬ್ರಹ್ಮ ಭುವನಾತ್ ಲೋಕಾ ಪುನರಾವರ್ತಿನ ಅರ್ಜುನ್ | ಮಾಮ್ ಉಮೇಶ್ಯ ತು ಕೌಂತೇಯ ಪುನರ್ಜನ ನ ವಿಧ್ಯತೇ ॥ (16)
ಇದನ್ನು ತಪ್ಪಾಗಿ ಈ ರೀತಿ ಅನುವಾದಿಸಿದ್ದಾರೆ:- ಹೇ ಅರ್ಜುನಾ! 'ಬ್ರಹ್ಮ ಲೋಕದಿಂದ ಹಿಡಿದು ಎಲ್ಲಾ ಲೋಕಗಳು ಪುನರಾವರ್ತನೆಯಲ್ಲಿವೆ. ಅಂದರೆ, ಅಲ್ಲಿ ಹೋದ ನಂತರ ಈ ಪ್ರಪಂಚಕ್ಕೆ ಮರಳುವ ಅವಶ್ಯಕತೆ ಇರುವುದಿಲ್ಲ. ಆದರೆ ನನ್ನನ್ನು ಪಡೆದ ಮೇಲೆ ಪುನರ್ಜನ್ಮ ಇರುವುದಿಲ್ಲ. (ಈ ಅನುವಾದ ತಪ್ಪು) ಈ ಪುಸ್ತಕದ ಕೊನೆಯಲ್ಲಿ ಗೀತೆಯ 8ನೇ ಅಧ್ಯಾಯದ 16ನೇ ಶ್ಲೋಕದ ಅನುವಾದವನ್ನು ನೀಡಿದೆ. ಅದನ್ನು ಗೋರಖ್ಪುರದ ಗೀತಾಪ್ರೆಸ್ ನವರು mudrisddare.
ಇದರ ನಿಜವಾದ ಅನುವಾದವು ಈ ರೀತಿ ಇದೆ :-
ಬ್ರಹ್ಮ ಲೋಕದಿಂದ ಹಿಡಿದು ಎಲ್ಲಾ ಲೋಕಗಳು ಪುನರಾವರ್ತನೆಯಲ್ಲಿವೆ. ಬ್ರಹ್ಮ ಲೋಕಕ್ಕೆ ಹೋದ ವ್ಯಕ್ತಿಗಳಿಗೂ ಸಹ ಪುನರ್ಜನ್ಮವಿರುತ್ತದೆ. ಅದು ಅವರಿಗೆ ಗೊತ್ತಿಲ್ಲ ಹೇ ಅರ್ಜುನ, ನನ್ನನ್ನು ಪಡೆದ ನಂತರವು ಸಹ ಅವರಿಗೆ ಪುನರ್ಜನ್ಮವಿದೆ' ಈ ಶ್ಲೋಕದಲ್ಲಿ ವಿದ ಎನ್ನುವ ಶಬ್ದಕ್ಕೆ 'ತಿಳಿಯುವುದು' ಎಂಬರ್ಥವಿದೆ. ಗೀತೆಯ 6ನೇ ಅಧ್ಯಾಯದ 23ನೇ ಶ್ಲೋಕದ 'ವಿದ್ಯಾತ್' ಎನ್ನುವ ಶಬ್ದಕ್ಕೆ 'ತಿಳಿಯುವುದು' ಎಂದು ಬರೆದಿದ್ದಾರೆ. ಈ ಶ್ಲೋಕದಲ್ಲಿಯೂ ಈ 'ವಿದ್ಯತೆ' ಎಂಬ ಶಬ್ದಕ್ಕೆ ತಿಳಿಯುವುದು ಎಂದೇ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಪುಸ್ತಕದಲ್ಲಿರು ಇದೇ ಶ್ಲೋಕದ ಫೋಟೋ ಕಾಪಿಯನ್ನು ನೋಡಿ, ಇನ್ನೂ ಸ್ಪಷ್ಟಪಡಿಸಬೇಕೆಂದರೆ 13 8ನೇ ಅಧ್ಯಾಯದ 15ನೇ ಶ್ಲೋಕವನ್ನು ಓದಿ. ಮೂಲ ಪಾಠ:-
ಮಾಮ್ ಉಪೇತ್ ಪುನರ್ಜನ್ಮ ದುಃಖಾಲಯಮ್ ಅಶಾಶ್ವತಮ್ ನ ಅಪ್ಪುವಂತಿ
ಮಹಾತ್ಮನಃ ಸಂಸಿದ್ಧಿಮ್ ಪರಮಾಮ್ ಗತಾಃ ॥ (8/15) ಅನುವಾದ :- (ಮಾಮ್ ) ನನ್ನನ್ನು ಪಡೆದ ನಂತರವೂ (ಪುನರ್ಜನ) ಮರಳಿ ಹುಟ್ಟು- ಸಾವು ಇರುತ್ತದೆ. ಇದು (ಅಶಾಶ್ವತಂ) ನಶ್ವರ ಜೀವನ, (ದುಃಖಾಲಯಂ) ದುಃಖಗಳ ಮನೆ (ಪರಮಾಮಂ) ಪರಮ (ಸಂಸಿದ್ಧಿಂ ಗತಾ) ಸಿದ್ಧಿಯನ್ನು ಪಡೆದ (ಮಹಾತ್ಮಯ: ಮಹಾತ್ಮ ಜನರು (ನ ಆಪ್ಪವಂತಿ) ಪುನರ್ಜನ್ಮವನ್ನು ಪಡೆಯುವುದಿಲ್ಲ (ಗೀತೆಯ 8ನೇ ಅಧ್ಯಾಯದ 15de des)
ಭಾವಾರ್ಥ :- ಗೀತೆಯ ಜ್ಞಾನವನ್ನು ನೀಡಿದಾತನು, ನನ್ನನ್ನು ಹೊಂದಿದರೆ ದುಃಖಗಳ ಮನೆ, ಕ್ಷಣ ಭಂಗುರದ ಜೀವನ, ಹುಟ್ಟು-ಸಾವು ಇರುತ್ತದೆ, ಯಾವ ಮಹಾತ್ಮನು ಪರಮಗತಿಯನ್ನು ಹೊಂದುವನೋ ಅವನಿಗೆ ಪುನರ್ಜನ್ಮವಿರುವುದಿಲ್ಲ' ಎಂದು ಹೇಳಿದ್ದಾನೆ.
ವಿಚಾರಮಾಡಿ :- ಗೀತೆಯ 8ನೇ ಅಧ್ಯಾಯದ 1 ರಿಂದ 10ನೇ ಶ್ಲೋಕದವರೆಗೆ ಇರುವ
ಸಾರಾಂಠವು ಈ ರೀತಿ ಇದೆ:-
ಅರ್ಜುನನು ಕೇಳುತ್ತಾನೆ (ಗೀತೆಯ 8ನೇ ಅಧ್ಯಾಯದ 1ನೇ ಶ್ಲೋಕ) ತತ್ ಬ್ರಹ್ಮ ಎಂದರೆ ಏನು?" ಗೀತೆಯ ಜ್ಞಾನದಾತನು 8ನೇ ಅಧ್ಯಾಯದ 3ನೇ ಶ್ಲೋಕದಲ್ಲಿ "ಅವನು ಪರಮ ಅಕ್ಷರ ಬ್ರಹ್ಮ" ಎಂದಿದ್ದಾನೆ.
ಮುಂದೆ ಗೀತೆಯ ಜ್ಞಾನದಾತನು 8ನೇ ಅಧ್ಯಾಯದ 5 ಮತ್ತು 7ನೇ ಶ್ಲೋಕದಲ್ಲಿ ತನ್ನನ್ನು ಆರಾಧಿಸುವಂತೆ ಹೇಳಿದ್ದಾನೆ. ಆದರೆ ಗೀತೆಯ 8ನೇ ಅಧ್ಯಾಯದ 8, 9, 10ನೇ ಶ್ಲೋಕದಲ್ಲಿ ಪರಮ ಅಕ್ಷರ ಬ್ರಹ್ಮನನ್ನು ಆರಾಧಿಸುವಂತೆ ಹೇಳಿದ್ದಾನೆ. ಗೀತೆಯ 8ನೇ ಅಧ್ಯಾಯದ 13ನೇ ಶ್ಲೋಕದಲ್ಲಿ ತನ್ನನ್ನು ಆರಾಧಿಸಲು ಕೇವಲ ಒಂದು "ಓಂ' ಅಕ್ಷರವಿದೆ ಎಂದಿದ್ದಾನೆ. ಅದನ್ನು ಸರಣೆ ಮಾಡುತ್ತಾ ಯಾರು ತಮ್ಮ ಶರೀರವನ್ನು ತ್ಯಜಿಸುತ್ತಾರೋ ಅವರಿಗೆ ಪರವ ಉಚ್ಚರಿಸುತ್ತಾ ಪದವು ಪ್ರಾಪ್ತವಾಗುವುದು ಎಂದಿದ್ದಾನೆ. ನಾಮಜಪದಿಂದ ಬ್ರಹ್ಮಲೋಕವು ಪ್ರಾಪ್ತಿಯಾಗುತ್ತದೆ ಎಂದು ಹಿಂದಿನಿಂದಲೂ ಶ್ರೀದೇವಿ ಪುರಾಣದಿಂದ ಸಾಬೀತುಗೊಳಿಸುತ್ತಾ ಬರುತ್ತಿದೆ. ಗೀತೆಯ 8ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಬ್ರಹ್ಮಲೋಕಕ್ಕೆ ಹೋದ ಸಾಧಕನಿಗೆ ಪುನರ್ಜನ್ಮವಿರುತ್ತದೆಂದು ಹೇಳಲಾಗಿದೆ. ಆದ್ದರಿಂದ ಗೀತೆಯ 8ನೇ ಅಧ್ಯಾಯದ 13ನೇ ಶ್ಲೋಕದ ಆದರ 8 ನಾಮ ಜಪದಿಂದ ಸಿಗುವ ಪರಮ ಪದದ ವರ್ಣನೆ ಇದೆ. ಆದರೆ ಗೀತೆಯ 8ನೇ ಅಧ್ಯಾಯದ 8, 9 ಮತ್ತು 10ನೇ ಶ್ಲೋಕದಲ್ಲಿ ಸಚ್ಚಿದಾನಂದ ಘನ ಬ್ರಹ್ಮ ಅರ್ಥಾತ್ 'ಪರಮ ದಿವ್ಯ ಪುರುಷರನ್ನು ಆರಾಧಿಸುವಂತೆ ಹೇಳದಾಗಿದೆ. ಗೀತೆಯ 17ನೇ ಅಧ್ಯಾಯದ 23ನೇ ಶ್ಲೋಕದಲ್ಲಿ ಇದರ ಮಂತ್ರವನ್ನು ಬರೆಯಲಾಗಿದೆ.
ಓಂ, ತತ್, ಸತ್, ರಸಿ, ನಿರ್ದೇಶಃ ಬ್ರಹ್ಮಣ,
ತ್ರಿವಿಧಃ ಸ್ಮೃತಃ ಬ್ರಾಹ್ಮಣಾಃ, ತೇನ್,
ವೇದಾ, ಚ, ಯತ್ತಾ, ಜೆ ವಿಹಿತಾ, ಪುರಾ |
ಅನುವಾದ:- ಹಟ್ಟಿದಾನಂದ ಘನ ಬ್ರಹ್ಮನನ್ನು ಆರಾಧಿಸುವ ಮುಂತವು 'ಓಂ ತತ್ ಸತ್'
ಓಂ ಮಂತ್ರವು ಬ್ರಹ್ಮ ಅಂದರೆ 'ಸ್ಪರ ಪುರುಷನದ್ದಾಗಿದೆ. ಅಕ್ಷರ ಪುರುಷನ ತತ್' ಎನ್ನುವ ಮಂತ್ರವು ಸಾಂಕೇತಿಕವಾಗಿದೆ. ಪರಮ ಅಕ್ಷರ ಬ್ರಹ್ಮನ 'ಸತ್' ಎನ್ನುವ ಮಂತ್ರವೂ ಸಹ ಸಾಂಕೇತಿಕವಾಗಿದೆ. ಈ ತಿ ಮಂತ್ರಗಳ ಜಪದಿಂದ ಪ್ರಾಪ್ತವಾಗುವ ಪರಮ ಗತಿಯ ಬಗ್ಗೆ ಗೀತೆಯ 15ನೇ ಅಧ್ಯಾಯದ 4ನೇ ಶ್ಲೋಕದಲ್ಲಿ ಹೇಳಲಾಗಿದೆ. ಅಲ್ಲಿಗೆ ಹೋಗುವ ಸಾಧಕನು ಮರಳಿ ಪ್ರಪಂಚಕ್ಕೆ ಬರುವುದಿಲ್ಲವೆಂದು ಹೇಳಲಾಗಿದೆ.
ಗೀತೆಯ 8ನೇ ಅಧ್ಯಾಯದ 16ನೇ ಶ್ಲೋಕದ ಅರ್ಥವು ಸರಿಯಾಗಿದೆ ಎಂದು ಭಾವಿಸಿದರೆ ಆರ್ಥಾತ್ 'ನನ್ನನ್ನು ಪಡೆಯುವವನಿಗೆ ಪುನರ್ಜನ್ಯವಿರುವುದಿಲ್ಲ' ಎನ್ನುವುದು ಸರಿಯಾದರೆ, ಗೀತೆಯ 2ನೇ ಅಧ್ಯಾಯದ 12ನೇ ಶ್ಲೋಕಗೀತೆಯ 4ನೇ ಅಧ್ಯಾಯದ 5ನೇ ಶ್ಲೋಕ, ಗೀತೆಯ 10ನೇ ಅಧ್ಯಾಯದ 2ನೇ ಶ್ಲೋಕ ತಪ್ಪಾಗುತ್ತದೆ. ಅದರಲ್ಲಿ ಗೀತೆಯ ಜ್ಞಾನದಾತನು ಹೀಗೆಂದಿ ದಾನ, '' ಅರ್ಜುನಾ ನಿನ್ನ ಮತ್ತು ನನ್ನ ಅನೇಕ ಜನಗಳಾಗಿವೆ. ನಿನಗೆ ಗೊತ್ತಿಲ್ಲ, ಆದರೆ ನನಗೆ ಗೊತ್ತು. ನನ್ನ ಹುಟ್ಟಿನ ಬಗ್ಗೆ ದೇವತೆಗಳಿಗಾಗಲೀ, ಮಹರ್ಷಿಗಳಿಗಾಗಲೀ, ಸಿದ್ಧರಿಗಾಗಲೀ ತಿಳಿದಿಲ್ಲ”. ಇಲ್ಲಿ ವಿಚಾರ ಮಾಡಬೇಕಾದ ವಿಷಯವೇನೆಂದರೆ ಇಷ್ಟ ದೈವಕ್ಕೆ ಹುಟ್ಟು-ಸಾವುಗಳಿದ್ದರೆ ಸಾಧಕನಿಗೆ ಪುನರ್ಜನ ಇರದೇ ಇರುವಂತಹ ಮೋಕ್ಷವು ಹೇಗೆ ಪ್ರಾಪ್ತವಾಗುವುದು?
ಆದ್ದರಿಂದ ಗೀತೆಯ 8ನೇ ಅಧ್ಯಾಯದ 16ನೇ ಶ್ಲೋಕದ ಅನುವಾದವನ್ನು ಯಾವ ರೀತಿ ನಾನು ಮಾಡಿದ್ದೇನೆಯೋ ಅದು ಸರಿಯಾಗಿದೆ. ಅಂದರೆ ಗೀತೆಯ ಜಾನದಾತನು ಹೇಳಿರುವಂತೆ, ಬ್ರಹ್ಮಲೋಕದಿಂದ ಹಿಡಿದು ಎಲ್ಲಾ ಲೋಕಗಳು ಪುನರಾವರ್ತನೆಯಲ್ಲಿರುತ್ತವೆ. ಅಂದರೆ ಬ್ರಹ್ಮಲೋಕಕ್ಕೆ ಹೋಗುವ ಜೀವಿಯು ಮರಳಿ ಈ ಪ್ರಪಂಚದಲ್ಲಿ ಜನ್ಮ ತಾಳುತ್ತಾನೆ. ಯಾರಿಗೆ ಇದು ಗೊತ್ತಿಲ್ಲವೊ ಅವರು ನನ್ನ ಭಕ್ತಿ ಮಾಡಿಕೊಂಡರು ಪುನರ್ಜನ್ಮಕ್ಕೆ ಪ್ರಾಪ್ತವಾಗುತ್ತಾರೆ. ಆದ್ದರಿಂದ ಗೀತೆಯ 18ನೇ ಅಧ್ಯಾಯದ 62ನೇ ಶ್ಲೋಕದಲ್ಲಿ ಹೇಳಿರುವಂತೆ ಹೇ ಅರ್ಜುನ! “ನೀನು ಸಂಪೂರ್ಣವಾಗಿ ಆ ಪರಮೇಶ್ವರನಿಗೆ ಶರಣಾಗು, ಅವನ ಕೃಪೆಯಿಂದ ನೀನು ಪರಮ ಶಾಂತಿಯನ್ನು ಹಾಗೂ ಸನಾತನ ಪರಮ ಧಾಮವನ್ನು ಆರ್ಥಾತ್ ಸತ್ಯಲೋಕವನ್ನು ಪಡೆಯುವ' ಇದೇ ಆಧಾರವು ಗೀತೆಯ 15ನೇ ಅಧ್ಯಾಯದ (ನೇ ಶ್ಲೋಕದಲ್ಲಿ ಇದಕ್ಕೆ ಆಧಾರವಿದೆ. ಅದರಲ್ಲಿ ಹೀಗೆಂದು ಬರೆದಿದೆ, "ತತ್ವದರ್ಶಿ ಸಂತನಿಂದ ತತ್ವಜ್ಞಾನವನ್ನು ಪಡೆದು ಆ ತತ್ವಜ್ಞಾನವೆಂಬ ಶಸ್ತ್ರದಿಂದ ಅಜ್ಞಾನವನ್ನು ಹೊಡೆದೋಡಿಸಿ ನಂತರ ಪರಮೇಶ್ವರನ ಪರಮ ಪದವನ್ನು ಹುಡುಕಬೇಕು. ಅಲ್ಲಿ ಹೋದ ಬಳಿಕ ಸಾಧಕನು ಮರಳಿ ಮತ್ತೆ ಪ್ರಪಂಚದಲ್ಲಿ ಬರುವುದಿಲ್ಲ.
ಯಾದ ಪರಮೇಶ್ವರನಿಂದ ಪ್ರಪಂಚವೆಂಬ ವೃಕ್ಷದ ಪ್ರವೃತ್ತಿಯು ಪ್ರಾಪ್ತವಾಗಿದೆಯೋ, ಆಧಾರ್ ಯಾವ ಪರಮೇಶ್ವರನು ಈ ಪ್ರಪಂಚವನ್ನು ಸೃಷ್ಟಿಸಿದ್ದಾನೋ, ಕೇವಲ ಅವನನ್ನು ಆರಾಧಿಸು, ಅವನಿಂದ ಮಾತ್ರ ಎಲ್ಲರ ಉದ್ಘಾರವಾಗುವುದು ಎಂದು ಗೀತೆಯ ಜ್ಞಾನದಾತನು ಹೇಳಿದ್ದಾನೆ.
ಬ್ರಹ್ಮನನ್ನು ಆರಾಧಿಸುವುದರಿಂದ ಪೂರ್ಣ ಮೋಕ್ಷವು ಸಿಗುವುದಿಲ್ಲ. ಪೂರ್ಣ ಪರಮಾತ್ಮನನ್ನು ಆರಾಧಿಸುವುದರಿಂದಲೇ ಪೂರ್ಣ ಮೋಕ್ಷ ಪ್ರಾಪ್ತಿಯಾಗುವುದು ಎಂಬುದು ಸ್ಪಷ್ಟವಾಯಿತು.
ಪ್ರಶ್ನೆ 13:- 'ಓಂ' ಈ ಮಂತ್ರವು ಬ್ರಹ್ಮನ ಜಪವಾಯಿತು. ಹಾಗಾದರೆ ಬ್ರಹ್ಮನನ್ನು ಪೂಜಿಸುವುದರಿಂದ ಪೂರ್ಣ ಮೋಕ್ಷವು ಸಿಗುವುದಿಲ್ಲವೆಂದು ಏಕೆ ಹೇಳುತ್ತಿರುವಿರಿ? ಗೀತೆಯ 17ನೇ ಅಧ್ಯಾಯದ 23ನೇ ಶ್ಲೋಕದಲ್ಲಿ 'ಓಂ ತತ್ ಸತ್' ಈ ಮಂತ್ರದ ಜಪದಿಂದ ಪೂರ್ಣ ಮೋಕ್ಷವು ಸಿಗುವುದು ಎಂದು ನೀವು ಹೇಳಿದಿರಿ, ಈ ಮಂತ್ರದಲ್ಲೂ ಸಹ 'ಓಂ' ಮಂತ್ರವಿದೆ.
ಉತ್ತರ: – ಒಬ್ಬ ಇಂಜಿನಿಯರ್ ಅಥವಾ ಡಾಕ್ಟರ್ ಆಗಲು ಶಿಕ್ಷಣದ ಅವಶ್ಯಕತೆ ಇರುತ್ತದೆ. ಮೊದಲು 1ನೇ ತರಗತಿ, ನಂತರ 5ನೇ, 8ನೇ ಹಾಗೂ 10ನೇ ತರಗತಿ ಓದಿ ಉತ್ತೀರ್ಣನಾಗಬೇಕಾಗುತ್ತದೆ. ಆದಾದ ನಂತರ ಮುಂದೆ ಶಿಕ್ಷಣ ಮುಂದುವರೆಸಬೇಕಾಗುತ್ತದೆ. ನಂತರದಲ್ಲಿ ತರಬೇತಿ ಪಡೆದು ಇಂಜಿನಿಯರ್್ರ ಅಥವಾ ವೈದ್ಯನಾಗಬೇಕಾಗುತ್ತದೆ. ಅದೇ ರೀತಿ ಬ್ರಹ್ಮಾ, ವಿಷ್ಣು, ಶಿವ, ಗಣೇಶ ಹಾಗೂ ದೇವಿಯ ಸಾಧನೆಯನ್ನು ಮಾಡಬೇಕಾಗುತ್ತದೆ. ನಾನು ಸ್ವತಃ ಮಾಡುತ್ತೇನೆ ಹಾಗೂ ನನ್ನ ಅನುಯಾಯಿಗಳಿಂದ ಮಾಡಿಸುತ್ತೇನೆ. ಇದು ಕೇವಲ 5ನೇ ತರಗತಿಯವರೆಗಿನ ಶಿಕ್ಷಣ ಎಂದು ತಿಳಿಯಬೇಕು, ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ 5 ಕಮಲಗಳನ್ನು ತೆರೆಯುವ ಸಾಧನವಾಗಿದೆ. ಬ್ರಹ್ಮನ ಸಾಧನೆಯು 10ನೇ ತರಗತಿಯವರೆಗೆ ಎಂದು ತಿಳಿಯಬೇಕು. ಅಂದರೆ, ಇದು ಬ್ರಹ್ಮಲೋಕದವರೆಗಿನ ಸಾಧನೆ, ಅದಕ್ಕಾಗಿ ಜಪವನ್ನು ಮಾಡಬೇಕು. 14ನೇ ತರಗತಿಯವರೆಗೆ ಶಿಕ್ಷಣ ಮುಂದುವರೆಸಬೇಕಾದರೆ (ತತ್) ಎಂಬ ಅಕ್ಷರ ಪುರುಷನ ಮಂತ್ರದಜಪವನ್ನು ಮಾಡಬೇಕು, ಈ ತತ್ ಮಂತ್ರವು ಸಾಂಕೇತಿಕವಾಗಿದೆ. ವಾಸ್ತವಿಕ ಮಂತ್ರವು ಇದಕ್ಕಿಂತ ಭಿನ್ನವಾಗಿದೆ. ಇದನ್ನು ಉಪದೇಶ ಪಡೆದವರಿಗೆ ಮಾತ್ರ ಹೇಳಿಕೊಡಲಾಗುತ್ತದೆ.
ಪರಮ ಅಕ್ಷರ ಪುರುಷನ ಸಾಧನೆಯು ಇಂಜಿನಿಯರ್ ಅಥವಾ ವೈದ್ಯನಾಗಲು ಓದುವಂಥಹ ಶಿಕ್ಷಣವೆಂದು ತಿಳಿಯಬೇಕು. ಅದನ್ನು 'ಸತ್' ಎಂಬ ಮಂತ್ರದಿಂದ ಜಪಿಸಬೇಕು, ಈ 'ಸತ್' ಎಂಬ ಮಂತ್ರವು ಸಹ ಸಾಂಕೇತಿಕವಾಗಿದೆ. ವಾಸ್ತವವಾಗಿ ಈ ಮಂತ್ರವು ಸಹ ಭಿನ್ನವಾಗಿದೆ. ಇದನ್ನು ಉಪದೇಶ ಪಡೆದವರಿಗೆ ಹೇಳಿಕೊಡಲಾಗುತ್ತದೆ. ಇದನ್ನು 'ಸಾರನಾಮ' ಎಂದು ಕರೆಯಲಾಗುತ್ತದೆ. ಆದರಿಂದ ಬ್ರಹ್ಮನೊಬ್ಬನ ಎಂಬ ನಾಮಜಪದಿಂದ ಪೂರ್ಣ ಮೋಕ್ಷವು ಪ್ರಾಪ್ತಿಯಾಗುವುದಿಲ್ಲ. 'ಓಂ' ಎಂಬುದು ಬ್ರಹ್ಮನ ನಾಮಜಪವಾಗಿದೆ. ಇದರಿಂದ ಗೀತೆಯ 8ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಹೇಳಿರುವಂತೆ ಸಾಧಕನಿಗೆ ಬ್ರಹ್ಮ ಲೋಕವೇನೋ ಪ್ರಾಪ್ತಿಯಾಗುತ್ತದೆ. ಆದರೆ ಅಲ್ಲಿಗೆ ತೆರಳಿದ ಸಾಧಕನಿಗೆ ಪುನಃ ಪುನರ್ಜನ್ಮ ಪ್ರಾಪ್ತಿಯಾಗುತ್ತದೆ. ಗೀತೆಯ: 15ನೇ ಅಧ್ಯಾಯದ 1ನೇ ಶ್ಲೋಕದಲ್ಲಿ ಹೇಳಿರುವಂತೆ ಪುನರ್ಜನ್ಮವಿದ್ದರೆ ಪೂರ್ಣ ಮೋಕ್ಷವು ಪ್ರಾಪ್ತಿಯಾಗುವುದಿಲ್ಲ. ಆಗ ಪುನರ್ಜನ್ಮ ಇರದೇ ಇರುವ ಪರಮಾತ್ಮನ ಆ 'ಪರಮ ಪದದ ಅನ್ವೇಷಣೆಯನ್ನು ಮಾಡಬೇಕು. ಪೂರ್ಣ ಗುರುವಿನ ಬಳಿ ಶಾಸ್ತಾನುಸಾರವಾಗಿ ಆರಾಧನೆಯನ್ನು ಮಾಡುವುದರಿಂದ ಪೂರ್ಣ ಮೋಕ್ಷವು ಸಂಭವವಾಗುತ್ತದೆ. ವರ್ತಮಾನದಲ್ಲಿ ಈ ವಿಶ್ವದಲ್ಲಿ ನನ್ನ
(ಸಂತರಾಮ್ ಪಾಲ್ದಾಸ್) ಬಿಟ್ಟು ಬೇರೆ ಯಾರ ಬಳಿಯೂ ಇದು ಸಿಗುವುದಿಲ್ಲ.
ಪ್ರಶ್ನೆ 14:- ಪರಮಾತ್ಮನು ಒಬ್ಬನೆ? ಅಥವಾ ಅನೇಕರಿದ್ದಾರೆಯೇ?
ಉತ್ತರ: - ಕುಲದ ಒಡೆಯ ಒಬ್ಬನೇ
Comments
Post a Comment